ನಾರಾಯಣಗುರು ತತ್ವಾದರ್ಶಗಳ ದಾರಿಯಲ್ಲಿ ಸಾಗೋಣ: ಸತೀಶ್ ಜಾರಕಿಹೊಳಿ
Update: 2018-08-28 13:52 GMT
ಬೆಳಗಾವಿ, ಆ.28: ಸಮಾಜದಲ್ಲಿನ ಅಸ್ಪಶ್ಯತೆ ಹಾಗೂ ಮೌಢ್ಯತೆಯನ್ನು ಸಮಾಜದಿಂದ ಕಿತ್ತೊಗೆಯಲು ಶ್ರಮಿಸಿದ ಸಮಾಜ ಸುಧಾರಕ ನಾರಾಯಣ ಗುರುಗಳ ತತ್ವಾದರ್ಶಗಳ ದಾರಿಯಲ್ಲಿ ನಾವೆಲ್ಲರೂ ಸಾಗೋಣವೆಂದು ಶಾಸಕ ಸತೀಶ್ ಜಾರಕಿಹೊಳಿ ತಿಳಿಸಿದರು.
ಜಿಲ್ಲಾಡಳಿತ ವತಿಯಿಂದ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿರುವ ಅಸ್ಪಶ್ಯತೆ ನಿವಾರಣೆಯಾಗಬೇಕಾದರೆ ನಾರಾಯಣ ಗುರುಗಳ ದಾರಿಯಲ್ಲಿ ಸಾಗುವುದೊಂದೆ ನಮಗಿರುವ ದಾರಿ ಎಂದು ತಿಳಿಸಿದರು.
ನಾರಾಯಣ ಗುರುಗಳ ಕುರಿತು ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆ ನಡೆಯಬೇಕು. ಅವರ ಜೀವನ, ಸಂದೇಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕು. ಇಂದಿನ ಯುವ ಜನಾಂಗ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.