ದಾವಣಗೆರೆ: ಪ್ರಯಾಣಿಕ ​ಮರೆತು ಹೋಗಿದ್ದ ದಾಖಲೆ ಪತ್ರ, ಹಣವನ್ನು ಹಿಂದಿರುಗಿಸಿದ ಅಟೋ ಚಾಲಕ

Update: 2018-08-28 17:08 GMT

ದಾವಣಗೆರೆ,ಆ.28: ಪ್ರಯಾಣಿಕರೊಬ್ಬರು ಮರೆತು ಹೋಗಿದ್ದ ದಾಖಲೆ ಪತ್ರಗಳು ಹಾಗೂ ಹಣವನ್ನು ಆಟೋ ಚಾಲಕರೊಬ್ಬರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ. 

ಬಸವರಾಜ್ ಹಣ ಹಿಂದಿರುಗಿಸಿದ ಆಟೋ ಚಾಲಕ. ಕಳೆದ ಆ. 26 ರಂದು ರಾತ್ರಿ 9-30 ಕ್ಕೆ ಮಿಜೋರಾಂ ಮೂಲದ ವಿದ್ಯಾರ್ಥಿ ಹಾಗೂ ಆತನ ಇಬ್ಬರು ಸ್ನೇಹಿತರು ನಗರದ ಆಂಜನೇಯ ಬಡಾವಣೆಯ ಹೋಟೆಲ್ ನಿಂದ ಬಾಪೂಜಿ ಎಂಬಿಎ ಕಾಲೇಜಿನ ವಿದ್ಯಾರ್ಥಿ ವಸತಿ ಗೃಹಕ್ಕೆ ಬಸವರಾಜ್ ಅವರ ಆಟೋದಲ್ಲಿ ತೆರಳಿದ್ದಾರೆ. 

ಈ ವೇಳೆ ಹಣವಿದ್ದ ಪರ್ಸ್ ಆಟೋದಲ್ಲಿಯೇ ಬಿಟ್ಟು ಹೋಗಿದ್ದಾರೆ. ನಂತರ ಬಸವರಾಜ್ ಮನೆಗೆ ತೆರಳಿದಾಗ ಆಟೋದಲ್ಲಿ ಪರ್ಸ್ ಇರುವುದು ಗಮನಕ್ಕೆ ಬಂದಿದೆ. ಅದರಲ್ಲಿ 20,500 ರೂ ಹಾಗೂ ಇತರೆ ದಾಖಲೆಗಳಿದ್ದವು. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ವಿದ್ಯಾರ್ಥಿಯನ್ನು ಪತ್ತೆ ಮಾಡಿ ಕಚೇರಿಗೆ ಕರೆಯಿಸಿದ ಎಸ್ಪಿ ಆರ್. ಚೇತನ್ ವಿದ್ಯಾರ್ಥಿಗೆ ಹಣ ಹಾಗೂ ಗುರುತಿನ ಪತ್ರಗಳನ್ನು ನೀಡಿದ್ದಾರೆ. 
ಆಟೋ ಚಾಲಕ ಬಸವರಾಜ್‍ನ ಪ್ರಾಮಾಣಿಕತೆ ಹಾಗೂ ನಿಷ್ಠೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News