ಬೀಡಾಡಿ ದನದ ದಾಳಿ: ಬಿಜೆಪಿ ಸಂಸದ ಲೀಲಾಧರ್ ವಘೇಲಾ ಆಸ್ಪತ್ರೆಗೆ ದಾಖಲು

Update: 2018-09-01 10:24 GMT

ಗಾಂಧಿನಗರ, ಸೆ.1: ಬೀಡಾಡಿ ದನವೊಂದು ದಾಳಿ ನಡೆಸಿದ ಪರಿಣಾಮ ಇಲ್ಲಿನ ಪಠಾಣ್ ಕ್ಷೇತ್ರದ ಬಿಜೆಪಿ ಸಂಸದ ಲೀಲಾಧರ್ ವಘೇಲಾ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದನದ ದಾಳಿಯಿಂದ ಸಂಸದ ವಘೇಲಾರಿಗೆ ಗಾಯಗಳಾಗಿದ್ದು, ಗಾಂಧಿನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ವಘೇಲಾರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಈಗಾಗಲೇ ಆಸ್ಪತ್ರೆಗೆ ಬಿಜೆಪಿ ನಾಯಕರು ಭೇಟಿ ನೀಡಿ ಸಂಸದರ ಆರೋಗ್ಯ ವಿಚಾರಿಸಿದ್ದಾರೆ. ವಘೇಲಾ ಅವರು ಮನೆಯಿಂದ ಹೊರಗೆ ಬಂದಾಗ ದನ ದಾಳಿ ನಡೆಸಿದೆ ಎನ್ನಲಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News