ಚುನಾವಣಾ ಫಲಿತಾಂಶ ಪ್ರಕಟಗೊಂಡ ಬೆನ್ನಲೇ ಅಲ್ಲಲ್ಲಿ ಹಿಂಸಾಚಾರ

Update: 2018-09-03 09:12 GMT

ಬೆಂಗಳೂರು, ಸೆ.3: ಸ್ಥಳೀಯಾಡಳಿತ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬೆನ್ನಲೇ ಅಲ್ಲಲ್ಲಿ ಹಿಂಸಾಚಾರ  ಕಾಣಿಸಿಕೊಂಡಿದೆ

ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ 16ರಲ್ಲಿ ಗೆಲುವಿನ ಮೆರವಣಿಗೆಯಲ್ಲಿ ತೆರಳುತ್ತಿದ್ದವರ ಮೇಲೆ ಆ್ಯಸಿಡ್ ರೂಪದ ರಾಸಾಯನಿಕ ದಾಳಿ ನಡೆದ ಘಟನೆ ವರದಿಯಾಗಿದೆ.

ಬಾರ್ ಲೈನ್ ರಸ್ತೆಯಲ್ಲಿ ಮೆರಣಿಗೆಯಲ್ಲಿ ಸಾಗುತಿದ್ದ  ಕಾಂಗ್ರೆಸ್ ನ ಇನಾಯತುಲ್ಲಾ ಖಾನ್ ಬೆಂಬಲಿಗರ ಮೇಲೆ ದಾಳಿ ನಡೆದಿದೆ. ದಾಳಿಯಲ್ಲಿ 10 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳು   ಕೋತಿ ತೋಪಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾಂಗ್ರೆಸ್ ವಿರುದ್ಧ ಕೆಲಸ  ಮಾಡಿರುವ ಆರೋಪದಲ್ಲಿ ಮೈಸೂರಿನ ಶಾಂತಿನಗರದಲ್ಲಿ  ಎಸ್ ಡಿಪಿಐ ಕಾರ್ಯಕರ್ತನಿಗೆ ಚೂರಿಯಿಂದ ಇರಿದ ಘಟನೆ ನಡೆದಿದೆ.

ಕೊಪ್ಪಳದ 19ನೇ ವಾರ್ಡ್ ನಲ್ಲಿ ಅತ್ತಿಗೆ ಸೋತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತನ ತಾಯಿ ರೆಹಮತ್ ಬಿ   ಮೇಲೆ ಚೂರಿಯಿಂದ  ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News