ತುಮಕೂರು: ಉತ್ತಮ ಶಿಕ್ಷಕ ಪ್ರಶಸ್ತಿಗೆ 12 ಜನರ ಆಯ್ಕೆ

Update: 2018-09-03 18:35 GMT

ತುಮಕೂರು,ಸೆ.03: ಸಾರ್ವಜನಿಕ ಶಿಕ್ಷಣ ಇಲಾಖೆ ಮಧುಗಿರಿ ಶೈಕ್ಷಣಿಕ ಜಿಲ್ಲೆಯಿಂದ 2018ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಎಲ್.ಪಿ.ಎಸ್., ಹೆಚ್.ಪಿ.ಎಸ್. ಹಾಗೂ ಪ್ರೌಢಶಾಲಾ ವಿಭಾಗದಿಂದ ತಲಾ 4 ಜನರಲ್ಲಿ 12 ಜನ ಶಿಕ್ಷಕರನ್ನು ಆಯ್ಕೆ ಮಾಡಿರುವುದಾಗಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಸೆಪ್ಟಂಬರ್ 05 ರಂದು ಕೊರಟಗೆರೆಯಲ್ಲಿ ನಡೆಯುವ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಉಪನಿರ್ದೇಶಕರು ತಿಳಿಸಿದ್ದಾರೆ.

ಕಿರಿಯ ಶಾಲಾ ಶಿಕ್ಷಕರು(ಎಲ್.ಪಿ.ಎಸ್.)ವಿಭಾಗದಿಂದ: ವೆಂಕಟರತ್ನಶೆಟ್ಟಿ ಕಿ.ಪ್ರಾ.ಶಾಲೆ, ಚುಂಚೇನಹಳ್ಳಿ ಮಧುಗಿರಿ ತಾಲೂಕು, ರಂಗಸ್ವಾಮಯ್ಯ ಸಹಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ. ಕಾಟಮಾಳ ಶಿರಾ ತಾಲೂಕು, ಬಿ.ನಾಗರಾಜು ಸಹ ಶಿಕ್ಷಕರು ಸ.ಕಿ.ಪ್ರಾ.ಶಾಲೆ,ರಾಮಯ್ಯನಪಾಳ್ಯ, ಪಾವಗಡ ತಾಲೂಕು, ಬಾಹುದ್ದೀನ್ ಸಾಹೇಬ್ ಸಹ ಶಿಕ್ಷಕರು ಸ.ಕಿ.ಪ್ರಾ.ಶಾಲೆ ಹೆಂಜೇನಹಳ್ಳಿ ,ಕೊರಟಗೆರೆ ತಾಲೂಕು

ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ರಂಗರಸಯ್ಯ ಮುಖ್ಯ ಶಿಕ್ಷಕರು ಸ.ಹಿ.ಪ್ರಾ.ಪಾ ಶಾಲೆ. ದೊಡ್ಡಸಾಗ್ಗರೆ ಕೊರಟಗೆರೆ ತಾಲೂಕು. ಸಿದ್ದಣ್ಣ ಸಹಶಿಕ್ಷಕರು ಸ.ಹಿ.ಪ್ರಾ.ಪಾ.ಶಾಲೆ ಚನ್ನನಕುಂಟೆ, ಶಿರಾ ತಾಲೂಕು, ಯಶವಂತರಾವ್ ಸ.ಶಿಕ್ಷಕರು ಸ.ಹಿ.ಪ್ರಾ.ಪಾ.ಶಾಲೆ ಕ್ಯಾತನಗೆರೆ ಪಾವಗಡ ತಾಲೂಕು, ಉಮಾಶಂಕರ್ ಪಿ. ಸಹ ಶಿಕ್ಷಕರು ಸುದ್ದೇಕುಂಟೆ ಸ.ಹಿ.ಪ್ರಾ.ಪಾ.ಶಾಲೆ ಮಧುಗಿರಿ ತಾಲೂಕು

ಪ್ರೌಢಶಾಲಾ ವಿಭಾಗ: ಎಂ.ಎಸ್.ನರಸಿಂಹಮೂರ್ತಿ ಸಹಶಿಕ್ಷಕರು ಸ.ಪ್ರೌ ಶಾಲೆ ಕೆ.ಆರ್.ಬಡಾವಣೆ ಮಧುಗಿರಿ, ಚಂದ್ರಯ್ಯ ಸಹ ಶಿಕ್ಷಕರು ಸರಕಾರಿ ಪ್ರೌಢಶಾಲೆ ಹುಳಿಗೆರೆ, ಶಿರಾ ತಾಲೂಕು, ಮಲ್ಲಿಕಾರ್ಜುನಸ್ವಾಮಿ ಸಹಶಿಕ್ಷಕರು ಮಲ್ಲಿಕಾರ್ಜುನಸ್ವಾಮಿ ಬಾಲಕಿಯರ ಪ್ರೌಢಶಾಲೆ, ಪಾವಗಡ ತಾಲೂಕು ಹಾಗೂ ಶಿವಕುಮಾರ್ .ಎಸ್.ಟಿ. ಸಹಶಿಕ್ಷಕರು ಸ.ಪ.ಪೂ.ಕಾಲೇಜು (ಪ್ರೌಢಶಾಲಾ ವಿಭಾಗ) ಕೊರಟಗೆರೆ ಟೌನ್ ಇವರುಗಳನ್ನು ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News