ವಕ್ಫ್ ಆಸ್ತಿ ಕಬಳಿಕೆ ವರದಿ ಸಲ್ಲಿಸಿದ ನಂತರ ನನಗೆ ಜೀವ ಬೆದರಿಕೆ ಇದೆ: ಮಾಣಿಪ್ಪಾಡಿ

Update: 2018-09-04 08:00 GMT

ಬೆಂಗಳೂರು, ಸೆ.4: ವಕ್ಫ್ ಆಸ್ತಿ  ಕಬಳಿಕೆ ವರದಿ ಸಲ್ಲಿಸಿದ ನಂತರ ನನಗೆ ಜೀವ ಬೆದರಿಕೆ ಇದೆ ಎಂದು ಅಲ್ಪ ಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಣಿಪ್ಪಾಡಿ ಅವರು ಹಿಂದೆ ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ನೀಡಲಾಗಿದ್ದ ಭದ್ರತೆಯನ್ನು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ   ವಾಪಸ್ ಪಡೆಯಲಾಗಿದೆ.  ವಿಪಕ್ಷ ನಾಯಕರು ಈ ಬಗ್ಗೆ ಸರಕಾರಕ್ಕೆ ಹಲವು ಬಾರಿ ಪತ್ರ  ಬರೆದರೂ ಪ್ರಯೋಜನವಾಗಿಲ್ಲ  ಎಂದು ಹೇಳಿದರು.

ನನಗೆ ಜೀವ ಬೆದರಿಕೆ ಇದ್ದರೂ, ಕಬಳಿಕೆಯಾಗಿರುವ ವಕ್ಫ್ ಆಸ್ತಿಯನ್ನು ಸರಕಾರ ಹಿಂದಕ್ಕೆ ಪಡೆಯುವ ತನಕ ಹೋರಾಟ ಮುಂದುವರಿಸುವುದಾಗಿ ಮಾಣಿಪ್ಪಾಡಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News