ಹಾಸನ: ಬಿಜೆಪಿಯಿಂದ ಮಂಜುನಾಥ್ ಶರ್ಮ ಉಚ್ಚಾಟನೆ
Update: 2018-09-04 13:42 GMT
ಹಾಸನ,ಸೆ.4: 2018 ರ ಹಾಸನ ವಿಧಾನಸಭಾ ಚುನಾವಣೆಯಲ್ಲಿ ಮತ್ತು ಹಾಸನ ನಗರಸಭೆ ಚುನಾವಣೆಯಲ್ಲಿ ಪಕ್ಷದ ತತ್ವ ಸಿದ್ದಾಂತ ಬಿಟ್ಟು ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಹಾಸನ ನಗರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಶರ್ಮ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ನಗರ ಮಂಡಲ ನಗರಾಧ್ಯಕ್ಷ ಶೋಭನ್ ಬಾಬು ತಿಳಿಸಿದ್ದಾರೆ.