ಶ್ರೀನಗರ: 9 ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ, ಕೊಲೆ
Update: 2018-09-05 07:03 GMT
ಶ್ರೀನಗರ, ಸೆ.5: ಒಂಭತ್ತು ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಲ್ಲದೆ, ಬಾಲಕಿಯ ಮೇಲೆ ಆ್ಯಸಿಡ್ ಸುರಿದು ಸುಟ್ಟು ಸಾಯಿಸಿದ ಪೈಶಾಚಿಕ ಘಟನೆ ಕಾಶ್ಮೀರದ ಬಾರಾಮುಲ್ಲಾದಲ್ಲಿ ನಡೆದಿದೆ.
ಬಾಲಕಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಕಳೆದ ರವಿವಾರ ಅರಣ್ಯ ಪ್ರದೇಶದಲ್ಲಿ ಪತ್ತಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಾಲಕಿಯ ಮಲತಾಯಿ, 14 ವರ್ಷದ ಮಲ ಸಹೋದರ ಹಾಗೂ ಇತರ ಮೂವರನ್ನು ಬಂಧಿಸಿದ್ದಾರೆ.
"ನಾವು ತಕ್ಷಣವೇ ತನಿಖೆ ಆರಂಭಿಸಿದ್ದೇವೆ. ಕುಟುಂಬದ ಸದಸ್ಯರೇ ಮತ್ಸರ ಹಾಗೂ ಸೇಡಿನಿಂದ ನಡೆಸಿರುವ ಈ ಕೃತ್ಯದ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸಲಾಗಿದೆ'' ಎಂದು ಹಿರಿಯ ಪೊಲೀಸ್ ಅಧಿಕಾರಿ ಇಮ್ತಿಯಾಝ್ ಹುಸೈನ್ ಹೇಳಿದ್ದಾರೆ.