ಇಂಜಿನಿಯರ್/ವಾಸ್ತುಶಿಲ್ಪಿಗಳಿಂದ ಅರ್ಜಿ ಆಹ್ವಾನ

Update: 2018-09-06 18:04 GMT

ಉಡುಪಿ, ಸೆ.6: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ಯೋಜನಾ ಪ್ರದೇಶದ ಹೊರಭಾಗದಲ್ಲಿ ಭೂಪರಿವರ್ತಿತ ಜಮೀನುಗಳಲ್ಲಿ ಒಂದು ಎಕರೆಗಿಂತ ಕಡಿಮೆ ಇರುವ ಪ್ರದೇಶಗಳಲ್ಲಿ ಏಕನಿವೇಶನ ಮತ್ತು ಬಹು ನಿವೇಶನ ವಿನ್ಯಾಸ ನಕ್ಷೆ ಅನುಮೋದನೆಗಾಗಿ ಅರ್ಹ ಖಾಸಗಿ ಡಿಪ್ಲೋಮ ಆರ್ಕಿಟೆಕ್ಟರ್/ ಬಿ.ಇ.ಆರ್ಕಿಟೆಕ್ಟರ್ ವಿದ್ಯಾರ್ಹತೆ ಹೊಂದಿರುವ ವಾಸ್ತುಶಿಲ್ಪಿಗಳಿಂದ ಅರ್ಜಿ ಗಳನ್ನು ಆಹ್ವಾನಿಸಲಾಗಿದೆ.

ಉಡುಪಿ ಜಿಪಂ ಅಭಿವೃದ್ಧಿ ಶಾಖೆಯಿಂದ ಅರ್ಜಿ ನಮೂನೆ ಪಡೆದು ಅ.15 ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಯೋಜನಾ ವ್ಯವಸ್ಥಾಪಕರನ್ನು (ದೂರವಾಣಿ:9880417532) ಸಂಪರ್ಕಿಸುವಂತೆ ಜಿಪಂನ ಮುಖ್ಯ ಕಾರ್ಯನಿವಾಹಕ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News