ಕೊಳ್ಳೇಗಾಲ: ನಗರಸಭೆಯ ಪಕ್ಷೇತರ ಸದಸ್ಯರಿಗೆ ಸಚಿವ ಪುಟ್ಟರಂಗಶೆಟ್ಟಿ ಸನ್ಮಾನ

Update: 2018-09-07 18:32 GMT

ಕೊಳ್ಳೇಗಾಲ,ಸೆ,7: ನಗರಸಭೆ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಶಂಕರನಾರಯಣ್ ಗುಪ್ತ, ಮನೋಹರ್, ಎ.ಪಿ ಶಂಕರ್ ರವರನ್ನು ಹಿಂದುಳಿದವರ್ಗದ ಕಲ್ಯಾಣ ಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಸನ್ಮಾನಿಸಿ ಗೌರವಿಸಿದರು.

ಪಟ್ಟಣದ ಅರುಣ್‍ಚಲೇಶ್ವರ ದೇವಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಚಾಮರಾಜನಗರದ ಶಾಸಕ, ಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿಯಾದರೂ ಜಿಲ್ಲೆಗಿಂತ ಕೊಳ್ಳೇಗಾಲ ಪಟ್ಟಣವೇ ನನಗೆ ಮೆಚ್ಚುಗೆಯಾದ ಸ್ಥಳ. ನಾನು ಇಲ್ಲೇ ವಿದ್ಯಾಬ್ಯಾಸ ಮಾಡಿದನಲ್ಲದೇ ರಾಜಕೀಯ ಜೀವನ ಆರಂಭಿಸಿದ ಸ್ಥಳವಾಗಿದೆ ಇದು ಎಂದರು.

ಈ ಸಂದರ್ಭ ನಗರಸಭೆ ಸದಸ್ಯರಾದ ಎ.ಪಿ.ಶಂಕರ್, ಶಂಕರನಾರಾಯಣ್ ಗುಪ್ತ, ಮನೋಹರ್, ಮುಖಂಡರುಗಳಾದ ಅಚ್ಗಾಳ್ ನಾಗರಾಜ್, ವೇಣುಗೊಪಾಲ್, ಮುಡಿಗುಂಡ ಶಾಂತರಾಜು, ಸೋಮಣ್ಣ, ನಂಜುಂಡಸ್ವಾಮಿ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News