ಮೈಸೂರು: ಭಾರತ್ ಬಂದ್‍ಗೆ ಬೆಂಬಲ ನೀಡಲು ಕೋರಿ ಗುಲಾಬಿ ಹೂಗಳನ್ನು ನೀಡಿದ ಕಾಂಗ್ರೆಸ್ ಮುಖಂಡರು

Update: 2018-09-09 13:10 GMT

ಮೈಸೂರು,9: ಪೆಟ್ರೋಲ್-ಡಿಸೇಲ್, ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ನಾಳೆ ಕರೆ ನೀಡಿರವ ಭಾರತ್ ಬಂದ್‍ಗೆ ಬೆಂಬಲ ನೀಡುವಂತೆ ಗುಲಾಬಿ ಹೂಗಳನ್ನು ನೀಡಿ ಕಾಂಗ್ರೆಸ್ ಮುಖಂಡರು ವ್ಯಾಪಾರಿಗಳಿಗೆ ಮನವಿ ಮಾಡಿದರು.

ಮಾಜಿ ಶಾಸಕ ವಾಸು ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು, ಕೆ.ಆರ್.ವೃತ್ತ ನಗರ ಬಸ್ ನಿಲ್ದಾಣ, ದೇವರಾಜ ಮಾಡುಕಟ್ಟೆ ಸುತ್ತಮುತ್ತಲ ಪ್ರದೇಶಗಳಿಗೆ ತೆರಳಿ ಪೆಟ್ರೋಲ್-ಡಿಸೇಲ್, ಸಿಲಿಂಡ್ ಬೆಲೆ ಗಗನಕ್ಕೇರಿದೆ. ಈ ಹಿನ್ನಲೆಯಲ್ಲಿ ದರ ಇಳಿಸುವಂತೆ ಒತ್ತಾಯಿಸಲು ಭಾರತ್ ಬಂದ್ ಕರೆ ನೀಡಲಾಗಿದ್ದು, ಇದಕ್ಕೆ ವ್ಯಾಪಾರಿಗಳು ಬೆಂಬಲ ನೀಡಬೇಕೆಂದು ಗುಲಾಬಿ ಹೂ ನೀಡಿ ಮನವಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶಕ್ಕೆ ಅಚ್ಚೇದಿನ್ ಕೊಡುತ್ತೇವೆ ಎಂದು ಅಧಿಕಾರಕ್ಕೆ ಬಂದಾಗಿನಿಂದ ಹೇಳುತ್ತಲೇ ಇದೆ. ಆದರೆ ದಿನಬಳಕೆ ಅಗತ್ಯ ವಸ್ತುಗಳ ಬೆಲೆ ಏರಿಸುತ್ತಲೇ ಇದೆ. ಖಾಸಗಿ ಉದ್ಯಮಿಗಳಿಗೆ ಪ್ರಧಾನಿ ಮೋದಿ ಅವರು ಮಣೆ ಹಾಕುತ್ತಿದ್ದಾರೆ. ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News