ಸಾಲಬಾಧೆ: ವಿಷ ಸೇವಿಸಿ ರೈತ ಮಹಿಳೆ ಆತ್ಮಹತ್ಯೆ
Update: 2018-09-09 16:13 GMT
ಹೊನ್ನಾಳಿ,ಸೆ.9: ಬೆಳೆ ಹಾನಿ, ಸಾಲ ಬಾಧೆಯಿಂದ ಬೇಸತ್ತು ರೈತ ಮಹಿಳೆಯೊಬ್ಬರು ತಮ್ಮ ಅಡಕೆ ಹೊಲದಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ತಾಲೂಕಿನ ವಿಜಯಪುರ ಗ್ರಾಮದಲ್ಲಿ ಸಂಭವಿಸಿದೆ.
ವಿಜಯಪುರ ಗ್ರಾಮದ ಸೇವಿಬಾಯಿ(60) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ.
3.34 ಎಕರೆಗಳಷ್ಟು ಜಮೀನು ಹೊಂದಿದ್ದ ಅವರು ಹತ್ತಿ, ಅಡಕೆ, ಮೆಕ್ಕೆಜೊಳ, ಚೆಂಡು ಹೂ ಕೃಷಿ ಮಾಡುತ್ತಿದ್ದರು. ಬೇಲಿಮಲ್ಲೂರು ಗ್ರಾಮದ ಕರ್ಣಾಟಕ ಬ್ಯಾಂಕಿನಲ್ಲಿ 1 ಲಕ್ಷ ರೂ. ಮತ್ತು ಹೊನ್ನಾಳಿಯ ಕೆನರಾ ಬ್ಯಾಂಕಿನಲ್ಲಿ 95 ಸಾವಿರ ರೂ.ಗಳಷ್ಟು ಬೆಳೆ ಸಾಲ ಮಾಡಿದ್ದರು. ಮೃತರಿಗೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.