ಮಂಡ್ಯ: ಭಾರತ್ ಬಂದ್ಗೆ ಬಿಎಸ್ಪಿ ಬೆಂಬಲ
Update: 2018-09-09 17:31 GMT
ಮಂಡ್ಯ, ಸೆ.9: ಪೆಟ್ರೋಲ್, ಡೀಸೆಲ್ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಸೆ.10 ರಂದು ಕಾಂಗ್ರೆಸ್ ಕರೆ ನೀಡಿರುವ ಭಾರತ್ ಬಂದ್ನ್ನು ಬಿಎಸ್ಪಿ ಬೆಂಬಲಿಸಲಿದೆ ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಸುರೇಶ್ ನಲ್ಲಹಳ್ಳಿ ತಿಳಿಸಿದ್ದಾರೆ.
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ 4 ವರ್ಷದಲ್ಲಿ 12ನೇ ಬಾರಿ ಪೆಟ್ರೋಲಿಯಂ ಉತ್ಪನ್ನಗಳನ್ನು ಹೆಚ್ಚಿಸಿ, ಜನಸಾಮಾನ್ಯರ ಬದುಕಿಗೆ ದೊಡ್ಡ ಹೊಡೆತ ನೀಡಿದೆ ಎಂದು ಅವರು ಕಿಡಿಕಾರಿದ್ದಾರೆ.
ಕಪ್ಪುಹಣ ತರಲಾಗುವುದು, ಕೋಟಿ ಕೋಟಿ ಉದ್ಯೋಗ ಸೃಷ್ಠಿಸಲಾಗುವುದು, ಅಚ್ಛೇದಿನ್ ಜನರಿಗೆ ಬರಲಿವೆ ಎಂದೆಲ್ಲಾ ಆಮಿಷ ತೋರಿ ಅಧಿಕಾರ ಹಿಡಿದ ಬಿಜೆಪಿ ಪೂರ್ವಾಗ್ರಹ ಪೀಡಿತರಂತೆ ವರ್ತಿಸಿ ಜನರನ್ನು ಭ್ರಾಂತಿಗೊಳಿಸಿದ್ದರ ಪರಿಣಾಮ ಜನರು ತತ್ತರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.