ಜಾರಕಿಹೊಳಿ ಬ್ರದರ್ಸ್ ಕಾಂಗ್ರೆಸ್ ಬಿಡಲ್ಲ: ಎಂ.ಬಿ. ಪಾಟೀಲ್

Update: 2018-09-11 06:47 GMT

ವಿಜಯಪುರ, ಸೆ.11: ಜಾರಕಿಹೊಳಿ ಬ್ರದರ್ಸ್ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗುವುದಿಲ್ಲ ಎಂದು ಮಾಜಿ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

‘‘ಜಾರಕಿಹೊಳಿ ಸಹೋದರರ ಅಸಮಾಧಾನಕ್ಕೆ ಸಣ್ಣಪುಟ್ಟ ಕಾರಣವಿರಬಹುದು. ಅಣ್ಣ-ತಮ್ಮಂದಿರ ನಡುವೆ ಸಮಸ್ಯೆ ಇರಬಹುದು. ಜಾರಕಿಹೊಳಿ ಸಹೋದರರು ಬಿಜೆಪಿಗೆ ಹೋದರೆ ಡಿಸಿಎಂ ಆಗುವುದು, ಹಾಗೂ ಬಿಜೆಪಿ ಅಧಿಕಾರಕ್ಕೆ ಬರುವುದು ಎರಡೂ ಕನಸಿನ ಮಾತು’’ ಎಂದು ಪಾಟೀಲ್ ಹೇಳಿದ್ದಾರೆ.

‘‘ರಮೇಶ್ ಜಾರಕಿಹೊಳಿ ಹಾಗೂ ಬಿಜೆಪಿ ಶಾಸಕ ರಾಮುಲು ಸಂಬಂಧಿಕರು. ಅವರಿಬ್ಬರು ಮಾತನಾಡಿದ ತಕ್ಷಣ ಜಾರಕಿಹೊಳಿ ಬಿಜೆಪಿಗೆ ಸೇರುತ್ತಾರೆ. ಸಮ್ಮಿಶ್ರ ಸರಕಾರ ಬೀಳುತ್ತದೆ ಎಂಬ ಅರ್ಥ ಕಲ್ಪಿಸುವುದು ಸರಿಯಲ್ಲ’’ ಎಂದು ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News