ಶಿರಾ: ಸಿಡಿಲು ಬಡಿದು ಯುವಕ ಸ್ಥಳದಲ್ಲೇ ಮೃತ್ಯು

Update: 2018-09-11 16:50 GMT

ಶಿರಾ,ಸೆ.11: ಸಿಡಿಲು ಬಡಿದು ಯುವಕನೊಬ್ಬ ಸ್ಥಳದಲ್ಲೇ ಸಾವಿಗೀಡಾದ ಘಟನೆ ಶಿರಾ-ಹಿರಿಯೂರು ರಾ.ಹೆ.48ರ ದ್ವಾರಾಳು ಸಮೀಪದ ಉಡುಸಲಮ್ಮ ದೇವಾಲಯದ ಬಳಿ ಮಂಗಳವಾರ ಸಂಜೆ ನಡೆದಿದೆ.

ಮೃತನನ್ನು ತೊಗರುಗುಂಟೆ ಗ್ರಾಮದ ನವೀನ್ (25) ಎಂದು ಗುರುತಿಸಲಾಗಿದೆ. ದೇವರ ದರ್ಶನಕ್ಕೆ ಕುಟುಂಬದೊಂದಿಗೆ ತೆರಳಿದ್ದ ಯುವಕ, ಆಕಸ್ಮಿಕವಾಗಿ ಸುರಿದ ಭಾರಿ ಮಳೆ ನಡುವೆ ಸಿಡಿಲಿಗೆ ಬಲಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ನಿಂತಿದ್ದ ಜನರೊಂದಿಗಿದ್ದ ಯುವಕನ ಪಕ್ಕದಲ್ಲಿಯೇ ಇದ್ದ ವಿದ್ಯುತ್ ಕಂಬಕ್ಕೆ ಬಡಿದ ಸಿಡಿಲಿನ ಪ್ರವಾಹ ಯುವಕನ ಬಲಿ ಪಡೆದಿದೆ. ಯುವಕನ ಪಕ್ಕದಲ್ಲಿದ್ದ ಆತನ ತಂದೆಯ ಎಡಭಾಗಕ್ಕೂ ಕರೆಂಟ್ ಶಾಕ್ ಹೊಡೆದ ಅನುಭವ ಆಗಿದೆ ಎಂದು ತಿಳಿದು ಬಂದಿದೆ. ತಾವರೆಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News