ಹೊನ್ನಾಳಿ: ಕೆಎಸ್‍ಆರ್‍ಟಿಸಿ ಬಸ್ ಢಿಕ್ಕಿ; ಟ್ಯಾಂಕರ್ ಜಖಂ

Update: 2018-09-12 13:05 GMT

ಹೊನ್ನಾಳಿ,ಸೆ.12: ನೀರು ಸಾಗಾಟದ ಟ್ಯಾಂಕರ್ ನ ಟ್ರ್ಯಾಕ್ಟರ್ ಗೆ ಕೆಎಸ್‍ಆರ್‍ಟಿಸಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಟ್ಯಾಂಕರ್ ಜಖಂಗೊಂಡಿರುವ ಘಟನೆ ತಾಲೂಕಿನ ಎಚ್. ಕಡದಕಟ್ಟೆ ವೃತ್ತದಲ್ಲಿ ಸಂಭವಿಸಿದೆ. 

ಕೆಎಸ್‍ಆರ್‍ಟಿಸಿ ಬಸ್ ನ್ಯಾಮತಿ ತಾಲೂಕಿನ ತೀರ್ಥರಾಮೇಶ್ವರ ಸುಕ್ಷೇತ್ರದಿಂದ ಕೆಂಚಿಕೊಪ್ಪ, ಸೊರಟೂರು, ಎಚ್. ಕಡದಕಟ್ಟೆ ಗ್ರಾಮಗಳ ಮಾರ್ಗವಾಗಿ ಹೊನ್ನಾಳಿಗೆ ಬರುತ್ತಿತ್ತು. ನೀರು ಸಾಗಾಟದ ಟ್ಯಾಂಕರ್ ನ ಟ್ರ್ಯಾಕ್ಟರ್ ಎಚ್. ಕಡದಕಟ್ಟೆ ಗ್ರಾಪಂ ವ್ಯಾಪ್ತಿಯ ತುಂಗಾ ಮೇಲ್ದಂಡೆ ನಾಲಾ ಕಾಲೋನಿಗೆ ನೀರು ಪೂರೈಸಲು ತೆರಳುತ್ತಿತ್ತು. 

ಅಪಘಾತದಲ್ಲಿ ಹಾನಿಗೀಡಾಗಿರುವ ಟ್ಯಾಂಕರ್ ರಿಪೇರಿಗೆ ಕೆಎಸ್‍ಆರ್‍ಟಿಸಿ ಬಸ್ ಚಾಲಕ 12 ಸಾವಿರ ರು. ನೀಡಿದ್ದು, ಎರಡೂ ವಾಹನಗಳ ಚಾಲಕರು ರಾಜೀ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News