ಸಾಗರ: ಕಾರು ಅಪಘಾತಕ್ಕೆ ಸರ್ಕಾರಿ ವೈದ್ಯ ಬಲಿ

Update: 2018-09-15 06:51 GMT

ಸಾಗರ, ಸೆ. 15: ಪ್ರವಾಸೋದ್ಯಮ ಇಲಾಖೆ ರಸ್ತೆ ಬದಿಯಲ್ಲಿ ಅಳವಡಿಸಿದ್ದ ಫಲಕಕ್ಕೆ ಕಾರು ಢಿಕ್ಕಿಯಾಗಿ ವೈದ್ಯರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಐಗಿನ್ ಬೈಲ್ ಕ್ರಾಸ್ ಬಳಿ ಮಧ್ಯರಾತ್ರಿ ನಡೆದಿದೆ.

ಮೃತರನ್ನು ಡಾ.ರಾಘವೇಂದ್ರ ರಾಜ್ (38) ಗುರುತಿಸಲಾಗಿದೆ.

ಮೂಲತ ತುಮಕೂರಿನವರಾದ ಇವರು ಕಡೂರು ಸಮೀಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಉನ್ನತ ವಿದ್ಯಾಭ್ಯಾಸಕ್ಕಾಗಿ ಅವರು ಕಾರವಾರಕ್ಕೆ ಹೊರಟಿದ್ದರು. ಅವರ ಸ್ನೇಹಿತ ಪ್ರಕಾಶ್ ಎಂಬವರ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಅಪಘಾತದಿಂದ ಚಾಲಕ ಪ್ರಕಾಶ್ ರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News