ಶ್ರೀನಗರ: ಆರು ಮಹಡಿ ಹೊಟೇಲ್‌ನಲ್ಲಿ ಅಗ್ನಿ ದುರಂತ

Update: 2018-09-15 09:24 GMT

ಶ್ರೀನಗರ, ಸೆ.15: ಹಲವು ಖಾಸಗಿ ಸಂಸ್ಥೆಗಳ ಕಚೇರಿಗಳಿರುವ ಶ್ರೀನಗರದ ರೀಗಲ್ ಚೌಕದಲ್ಲಿರುವ ಆರು ಮಹಡಿಯ ಪ್ರಸಿದ್ಧ ಹೊಟೇಲ್ ಪಾಂಪೋಶ್‌ನಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡಿದೆ. ಹೊಟೇಲ್‌ನ ಮೇಲಿನ ಮಹಡಿ ಬೆಂಕಿಯಿಂದಾಗಿ ಸಂಪೂರ್ಣ ಭಸ್ಮವಾಗಿದೆ.

‘‘ಬೆಂಕಿಯನ್ನು ತಹಬಂದಿಗೆ ತರಲಾಗಿದೆ. ಕಟ್ಟಡದೊಳಗೆ ಯಾರೂ ಕೂಡ ಸಿಲುಕಿಹಾಕಿಕೊಂಡಿಲ್ಲ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ’’ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

 ಹೊಟೇಲ್ ಕಟ್ಟಡದ ಆರನೇ ಹಾಗೂ ಕೊನೆಯ ಮಹಡಿಯಲ್ಲಿ ಬೆಂಕಿಯ ಹೊಗೆ ಕಾಣಿಸಿಕೊಂಡಿದ್ದು ಅಗ್ನಿಶಾಮಕ ದಳದ ಸಿಬ್ಬಂದಿಗಳು ಆರನೇ ಮಹಡಿಗೆ ತಲುಪಿ ಬೆಂಕಿಯು ಇತರ ಮಹಡಿಗೆ ಹರಡದಂತೆ ನೋಡಿಕೊಳ್ಳುತ್ತಿದ್ದಾರೆ. ಹೊಟೇಲ್‌ನಲ್ಲಿರುವ ಜನರನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News