ಒಂದೇ ದಿನ ಐವರು ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸಿದ ನ್ಯಾಯಾಧೀಶೆ

Update: 2018-09-16 03:40 GMT

ಕೋಲಾರ, ಸೆ.16: ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಐವರು ಆರೋಪಿಗಳಿಗೆ ಒಂದೇ ದಿನ ಮರಣ ದಂಡನೆ ವಿಧಿಸುವ ಮೂಲಕ ಕೋಲಾರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಶನಿವಾರ ರಾಜ್ಯದ ನ್ಯಾಯಾಂಗ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದರು.

ಮೊದಲ ಪ್ರಕರಣದಲ್ಲಿ ಮಾಲೂರಿನಲ್ಲಿ ಶಾಲಾ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಸುರೇಶ್‌ ಬಾಬು ಎಂಬ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದರು. ಈ ಘಟನೆ ಆಗಸ್ಟ್ 1ರಂದು ನಡೆದಿದ್ದು, 45 ದಿನಗಳಲ್ಲಿ ತೀರ್ಪು ಹೊರಬಿದ್ದಿದೆ.

ಎರಡನೇ ಪ್ರಕರಣದಲ್ಲಿ, ಮಾಲೂರು ಸಮೀಪದ ಮಾಸ್ತಿಯ ಕುಪ್ಪೂರು ಎಂಬ ಗ್ರಾಮದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ 2014ರ ಮೇ 28ರಂದು ಅತ್ಯಾಚಾರ ಎಸಗಿದ ನಾಲ್ವರು ಆರೋಪಿಗಳಿಗೆ ಮರಣ ದಂಡನೆ ವಿಧಿಸಿದರು. ಮುನಿಕೃಷ್ಣ, ನಾರಾಯಣಸ್ವಾಮಿ, ಅನಿಲ್‌ಕುಮಾರ್ ಮತ್ತು ಕೃಷ್ಣಮೂರ್ತಿ ಶಿಕ್ಷೆಗೆ ಒಳಗಾದವರು.

ಮೊದಲ ಪ್ರಕರಣದಲ್ಲಿ ಕ್ರೀಡಾಕೂಟ ಮುಗಿಸಿ ಮಾಲೂರಿನಿಂದ ಮನೆಗೆ ವಾಪಸ್ಸಾಗುತ್ತಿದ್ದ 16 ವರ್ಷದ ಬಾಲಕಿಯನ್ನು ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News