ಮೈಸೂರು: ಜೆಡಿಎಸ್ ಆಂತರಿಕ ಕಚ್ಚಾಟಕ್ಕೆ ಬೇಸತ್ತು ಜಿ.ಪಂ.ಸದಸ್ಯೆ ರಾಜೀನಾಮೆ

Update: 2018-09-17 17:34 GMT

ಮೈಸೂರು,ಸೆ.17: ಜೆಡಿಎಸ್ ಆಂತರಿಕ ಕಚ್ಚಾಟಕ್ಕೆ ಬೇಸತ್ತ ಜಿಲ್ಲಾ ಪಂಚಾಯತ್ ಸದಸ್ಯೆಯೋರ್ವರು ರಾಜೀನಾಮೆ ನೀಡಿದ್ದಾರೆ.

ಕಡಕೊಳ ಜಿ.ಪಂ. ಸದಸ್ಯೆ ರೂಪ ಲೋಕೇಶ್ ರಾಜೀನಾಮೆ ನೀಡಿದ್ದು, ಸಾರಾ ನಂದೀಶ್ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹಿನ್ನೆಲೆಯಲ್ಲಿ ಅಸಮಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಮುಖಂಡರ ನಡೆಗೆ ಬೇಸತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.

ರೂಪ ಲೋಕೇಶ್ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಕಡೇ ಕ್ಷಣದಲ್ಲಿ ಸಾ.ರಾ. ನಂದೀಶ್ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News