ದಿಲ್ಲಿಯಲ್ಲಿ ಸಂಜೆ 4 ಗಂಟೆಗೆ ಕಾಂಗ್ರೆಸ್ ನ ಮಹತ್ವದ ಸಭೆ

Update: 2018-09-19 05:37 GMT

ಹೊಸದಿಲ್ಲಿ. ಸೆ.19: ದಿಲ್ಲಿಯಲ್ಲಿ ರಾಜ್ಯ ಕಾಂಗ್ರೆಸ್ ನ ಮಹತ್ವದ ಸಭೆ ಬುಧವಾರ ಸಂಜೆ 4 ಗಂಟೆಗೆ ನಡೆಯಲಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಿವಾಸದಲ್ಲಿ  ನಡೆಯಲಿರುವ  ಈ ಸಭೆಗೆ ಕೆಪಿಸಿಸಿ  ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆಗೆ ಆಹ್ವಾನವಿಲ್ಲ ಎನ್ನಲಾಗಿದೆ. ಖಂಡ್ರೆಗೆ ಆಹ್ವಾನ ನೀಡದಿರುವ ವಿಚಾರದಲ್ಲಿ ಅಪಸ್ವರ ಕೇಳಿ ಬಂದಿದೆ.

ರಾಜ್ಯ ಸಚಿವ ಸಂಪುಟ ರಚನೆಯ ಬಗ್ಗೆ   ಅಧ್ಯಕ್ಷ ರಾಹುಲ್ ಗಾಂಧಿ ಅವರು ಕಾಂಗ್ರೆಸ್  ರಾಜ್ಯ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ.

ಸಚಿವ ಸ್ಥಾನದ  ಆಕಾಂಕ್ಷಿ ಮಾಜಿ ಸಚಿವ ರಾಮಲಿಂಗಾ ರೆಡ್ಡಿ  ದಿಲ್ಲಿ ತಲುಪಿದ್ದಾರೆ. ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ರಾಜ್ಯ ನಾಯಕರ ಲಾಬಿ ಶುರುವಾಗಿದೆ. ನಿಗಮ ಮಂಡಳಿಗಳಿಗೂ  ನೇಮಕದ ಬಗ್ಗೆ  ಆಗ್ರಹ ಕೇಳಿ  ಬಂದಿದೆ. ನಿಗಮ ಮಂಡಳಿಗಳಲ್ಲಿ  ಸ್ಥಾನ ಪಡೆಯಲು ಶಾಸಕರು ಪ್ರಯತ್ನ ನಡೆಸಿದ್ದಾರೆ.ಬೆಳಗಾವಿ ರಾಜಕೀಯ ತಣ್ಣಗಾಗಿದ್ದರೂ ಇದೀಗ ಬಳ್ಳಾರಿಯಲ್ಲಿ ರಾಜಕಾರಣ ಗರಿಗೆದರಿದೆ.2 ಸಚಿವ ಸ್ಥಾನಗಳನ್ನು  ಬಳ್ಳಾರಿಗೆ ನೀಡುವಂತೆ  ಕಾಂಗ್ರೆಸ್  ಶಾಸಕರು ಹೈಕಮಾಂಡನ್ನು ಒತ್ತಾಯಿಸಲಿದ್ದಾರೆ.

,,,,,,,,,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News