ಹನೂರು: ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ

Update: 2018-09-19 15:55 GMT

ಹನೂರು,ಸೆ.19: ಹನೂರು ಸಮೀಪದ ಲೊಕ್ಕನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು. 

ಸಹಕಾರ ಸಂಘದ ಅಧ್ಯಕ್ಷ ಎಸ್ ಶಿವುಕುಮಾರ್ ಈ ಸಭೆಯನ್ನು ಉದ್ಘಾಟಿಸಿದರು. ಕಾರ್ಯದರ್ಶಿ ವಿಜಯ್‍ಶೆಟ್ಟಿ ಈ ವರ್ಷದ ಲೆಕ್ಕ ಪತ್ರ ಹಾಗೂ ಮುಂದಿನ ಬಜೆಟನ್ನು ಮಂಡಿಸಿದರು. ಕಳೆದ ವರ್ಷದ ಬೋನಸ್ 1.93 ಲಕ್ಷ ರೂ.ಗಳನ್ನು ವಿಂಗಡಣೆ ಮಾಡಿ ಹಾಲು ಹಾಕಿದ ಪ್ರತಿ ರೈತರಿಗೆ ವಿತರಿಸಿದರು. ನಂತರ ಸಂಘದ ಅಧ್ಯಕ್ಷ ಎಸ್.ಶಿವುಕುಮಾರ್ ಮಾತನಾಡಿದರು 

ಈ ಸಂದರ್ಭ ಗ್ರಾಪಂ ಸದಸ್ಯರಾದ ಮುತ್ತುಸ್ವಾಮಿ, ಟಿ.ಕೆ ಸೆನ್ನಿಯನ್ನ್, ಪಾರ್ವತಿ ಸಂಘದ ಉಪಾಧ್ಯಕ್ಷ ಭೋಜರಾಜು, ನಿರ್ದೇಶಕರುಗಳಾದ ಚಿನ್ನದೊರೈ, ಅರ್ಧನಾರಿ, ಬಿ.ನಿಂಗಶೆಟ್ಟಿ, ಎಸ್.ವೇಲುಸ್ವಾಮಿ ಮಾದೇವ, ಎಂ.ರತ್ನಸ್ವಾಮಿ, ಸಿದ್ದೇಗೌಡ, ಮಣಿ, ನಿರ್ಮಲಕುಮಾರಿ, ಕಾರ್ಯದರ್ಶಿ ವಿಜಯ್‍ಶೆಟ್ಟಿ , ಮುಖಂಡ ರಾಜುಗೌಂಡ್, ಕೆಎಸ್ ತಂಗಮುತ್ತು ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News