ಇಂದು ಸಂಜೆ 4 ಗಂಟೆಗೆ ಎಚ್ ಡಿ ದೇವೇಗೌಡ ಕುಟುಂಬದ ದಾಖಲೆ ಬಹಿರಂಗ : ಬಿಎಸ್ ವೈ

Update: 2018-09-20 07:03 GMT

ಬೆಂಗಳೂರು, ಸೆ.20: ಇಂದು ಸಂಜೆ 4 ಗಂಟೆಗೆ ಪತ್ರಿಕಾಗೋಷ್ಠಿಯಲ್ಲಿ   ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಕುಟುಂಬದ ಹಗರಣಗಳ ದಾಖಲೆಯನ್ನು ಬಿಡುಗಡೆ ಮಾಡುವುದಾಗಿ  ಮಾಜಿ ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಒಬ್ಬ ಮಾಜಿ ಮುಖ್ಯ  ಮಂತ್ರಿಯಾಗಿ , ರಾಷ್ಟ್ರೀಯ ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿ  ನನ್ನ ಇತಿಮಿತಿಗಳು ಏನೆಂದು ನನಗೆ ಗೊತ್ತಿದೆ ಎಂದರು  

ಎಚ್ ಡಿ ಕುಮಾರಸ್ವಾಮಿಯವರೇ  ಮುಖ್ಯಮಂತ್ರಿ ಸ್ಥಾನ ಶಾಶ್ವತವಲ್ಲ.  ನಮ್ಮ ಅಧಿಕಾರದ  ಐದು  ವರ್ಷಗಳ  ಅವಧಿಯಲ್ಲಿ ಯಾರ ಮೇಲೂ ಸೇಡು ತೀರಿಸಿಕೊಂಡಿಲ್ಲ. ಆದರೆ ನೀವು ಜನರಲ್ಲಿ ಗೊಂದಲವನ್ನುಂಟು ಮಾಡುವ ಪ್ರಯತ್ನ  ನಡೆಸುತ್ತಿದ್ದಾರೆ. ನಿಮ್ಮ ಕುಟುಂಬದವರು ಮಾಡಿದಷ್ಟು ಭೂ ಹಗರಣ ಯಾರೂ ಮಾಡಿಲ್ಲ  ಎಂದು ಗುಡುಗಿದರು.

ರಾಜದಲ್ಲೀ ಮಾತ್ರ ನಿಮಗೆ ಅಧಿಕಾರವಿದೆ. ಕೇಂದ್ರದಲ್ಲಿ ಅಧಿಕಾರ ನಮ್ಮ ಕೈಯಲ್ಲಿದೆ.  ನಿಮ್ಮ ಧಮ್ಕಿಗೆ ನಾನು ಹೆದರುವುದಿಲ್ಲ ಎಂದು ಬಿಎಸ್ ವೈ ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News