ಪತ್ರಕರ್ತರ ಸಮ್ಮುಖದಲ್ಲೇ ಇಬ್ಬರ ಎನ್ ಕೌಂಟರ್ ನಡೆಸಿದ ಉತ್ತರ ಪ್ರದೇಶ ಪೊಲೀಸರು

Update: 2018-09-20 09:24 GMT

ಆಲಿಘರ್, ಸೆ.20: ಎನ್ ಕೌಂಟರ್ ನಡೆಯುತ್ತಿದ್ದ ಸ್ಥಳಕ್ಕೆ ಪತ್ರಕರ್ತರನ್ನು ಆಹ್ವಾನಿಸಿ ಕ್ಯಾಮರಾ ಮುಂದೆಯೇ ಇಬ್ಬರನ್ನು ಪೊಲೀಸರು ಗುಂಡಿಕ್ಕಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಆಲಿಘಡ್ ನಲ್ಲಿ ನಡೆದಿದೆ.

ಪೊಲೀಸರು ಗುರಿಯಿಟ್ಟು ಗುಂಡಿಕ್ಕುವ ದೃಶ್ಯಗಳು ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಮುಸ್ತಕೀಮ್ ಮತ್ತು ನೌಶಾದ್ ಎಂಬ ಈ ಇಬ್ಬರನ್ನು ಹಲವು ದಿನಗಳಿಂದ ಹುಡುಕುತ್ತಿದ್ದುದಾಗಿ ಪೊಲೀಸರು ಹೇಳಿದ್ದಾರೆ. ಈ ಇಬ್ಬರು ಕಳೆದ ತಿಂಗಳು ಆರು ಕೊಲೆ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

“ಈ ಘಟನೆ ಇಂದು ಬೆಳಗ್ಗೆ 6:30ಕ್ಕೆ ನಡೆದಿತ್ತು. ನಾವು ಅವರನ್ನು ತಡೆಯಲು ಯತ್ನಿಸಿದಾಗ ನಮ್ಮೆಡೆಗೆ ಅವರು ಗುಂಡು ಹಾರಿಸಿದರು. ನಾವು ಅವರ ಬೆನ್ನತ್ತಿದೆವು. ಇಬ್ಬರೂ ಪಾಳುಬಿದ್ದ ಸರಕಾರಿ ಕಟ್ಟಡವೊಂದರಲ್ಲಿ ಅಡಗಿ ಕೂತಿದ್ದರು. ಅವರು ಅಲ್ಲಿಂದಲೇ ನಮ್ಮೆಡೆಗೆ ಗುಂಡು ಹಾರಿಸುತ್ತಿದ್ದರು.  ನಾವು ಕೂಡ ಗುಂಡು ಹಾರಿಸಿದ್ದು ಇಬ್ಬರಿಗೂ ತಗಲಿತ್ತು. ಇಬ್ಬರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ನಮ್ಮ ಒಬ್ಬ ಅಧಿಕಾರಿಗೂ ಗಾಯವಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News