ಚಿನ್ನದ ವ್ಯಾಪಾರಿಯ ಬರ್ಬರ ಹತ್ಯೆ

Update: 2018-09-20 12:54 GMT

ದಾವಣಗೆರೆ,ಸೆ.20: ನಗರದ ಹೊರವಲಯದ ಶಕ್ತಿನಗರದ ರೈಲ್ವೆ ಹಳಿ ಪಕ್ಕದಲ್ಲಿ ಚಿನ್ನದ ವ್ಯಾಪಾರಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ನಗರದ ಮಲ್ಲಿಕಾರ್ಜುನ್ ಜ್ಯುವೆಲರ್ಸ್ ಮಾಲಕ ಹರೀಶ್ (40) ಶವವಾಗಿ ಪತ್ತೆಯಾಗಿರುವ ವ್ಯಕ್ತಿ. ಹರೀಶ್‍ನ ಶವದ ಬಳಿ ಕಾರು ಪತ್ತೆಯಾಗಿದ್ದು, ಇತ್ತೀಚೆಗಷ್ಟೇ ಗೆಳೆಯರೊಂದಿಗೆ ಗೋವಾಕ್ಕೆ ತೆರಳಿ, ಬುಧವಾರ ದಾವಣಗೆರೆಗೆ ಬಂದಿದ್ದರು ಎನ್ನಲಾಗಿದೆ.

ಹಣಕಾಸಿನ ವ್ಯವಹಾರದ ಹಿನ್ನಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಧಾವಿಸಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News