ಹಣ ಕೇಳಿದ್ದಕ್ಕೆ ವ್ಯಕ್ತಿಯ ಅಪಹರಣ, ಬಿಡುಗಡೆ: ದೂರು ದಾಖಲು

Update: 2018-09-24 18:31 GMT

ಮೈಸೂರು,ಸೆ.24: ಮರದ ವ್ಯಾಪಾರವೊಂದರಲ್ಲಿ ಬಾಕಿ ಉಳಿಸಿಕೊಂಡಿದ್ದ ಹಣ ಕೇಳಿದ್ದಕ್ಕೆ ವ್ಯಕ್ತಿಯೋರ್ವನನ್ನು ಅಪಹರಿಸಿ ಬಿಡುಗಡೆಗೊಳಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮುಹಮದ್ ಬಶೀರ್ ಎಂಬವರನ್ನು ಯತಿರಾಜ್ ಮತ್ತು ಶಹಾಬುದ್ದೀನ್ ಎಂಬವರು ಅಪಹರಿಸಿದ್ದರು ಎನ್ನಲಾಗಿದೆ. ಇವರಿಬ್ಬರು ಮಹಮದ್ ಬಶೀರ್ ಗೆ 6ಲಕ್ಷರೂ. ನೀಡಬೇಕಿತ್ತು. ಹಣವನ್ನು ಕೊಡಲು ಕೇಳಿದಾಗ ಜಗನ್ಮೋಹನ ಅರಮನೆ ಬಳಿ ಬರುವಂತೆ ತಿಳಿಸಿದ್ದು, ಅದರಂತೆ ಮಹಮದ್ ಬಶೀರ್ ಜಗನ್ಮೋಹನ ಅರಮನೆ ಬಳಿ ಬಂದಿದ್ದಾರೆ. ಕಾರಿನಲ್ಲಿ ಮುಹಮದ್ ಅವರನ್ನು ಅಪಹರಿಸಿ ತಿ.ನರಸೀಪುರದ ತೋಟದ ಮನೆಯೊಂದರಲ್ಲಿ ಮೂರು ದಿನಗಳ ಕಾಲ ಇರಿಸಿ, ಅವರ ಮೇಲೆ ಹಲ್ಲೆ ನಡೆಸಿ ಹಣ ಕೇಳಬಾರದೆಂದು ಬೆದರಿಕೆ ಹಾಕಿ ಬಿಡುಗಡೆ ಮಾಡಿದ್ದಾರೆಂದು ಮಹಮದ್ ಬಶೀರ್ ದೂರಿನಲ್ಲಿ ತಿಳಿಸಿದ್ದಾರೆ.

ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News