ಗುಂಡ್ಲುಪೇಟೆಯಲ್ಲಿ ಲಾರಿ ಅಪಘಾತ: ಚಾಲಕನಿಗೆ ಗಾಯ

Update: 2018-09-25 12:39 GMT

ಗುಂಡ್ಲುಪೇಟೆ,ಸೆ.25: ತಾಲೂಕಿನ ಬೇಗೂರು ಸಮೀಪ ಮೈಸೂರಿನಿಂದ ಕೇರಳಕ್ಕೆ ಸಾಗುತ್ತಿದ್ದ ದಾಳಿಂಬೆ ಹಣ್ಣು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ನೆಲಕ್ಕುರುಳಿದ ಘಟನೆ ನಡೆದಿದೆ.

ಬೆಳಗ್ಗಿನ ಜಾವ ಈ ಘಟನೆ ಸಂಭವಿಸಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಬಗ್ಗೆ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News