ಕೊಳ್ಳೇಗಾಲ: ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ
Update: 2018-09-25 18:29 GMT
ಕೊಳ್ಳೇಗಾಲ,ಸೆ.25: ಸಾಲಭಾದೆ ತಾಳಲಾರದೆ ರೈತರೋರ್ವರು ವಿಷ ಸೇವಿಸಿ ಆತ್ಮಹತ್ಯೆಗೈದ ಘಟನೆ ಮಂಗಳವಾರ ತಾಲೂಕಿನ ಕೆಂಪನಪಾಳ್ಯ ಗ್ರಾಮದಲ್ಲಿ ಜರುಗಿದೆ.
ತಾಲೂಕಿನ ಕೆಂಪನಪಾಳ್ಯ ಗ್ರಾಮದ ಗುರುಸ್ವಾಮಿ (65) ಎಂಬವರೇ ಆತ್ಮಹತ್ಯೆಗೈದ ರೈತ.
ಮೃತ ಗುರುಸ್ವಾಮಿ ತನ್ನ ಹೆಂಡತಿ ಹಾಗೂ ಸೊಸೆಯಿಂದ ಸ್ತ್ರೀಶಕ್ತಿ ಸಂಘದಲ್ಲಿ 2.80 ಲಕ್ಷ ಸಾಲ ಹಾಗೂ ಹಲವಾರು ಕಡೆ ಕೈ ಸಾಲ ತೆಗೆದುಕೊಂಡು ಜಮೀನು ಮತ್ತು ಹಸುಗಳನ್ನು ಸಾಕಿಕೊಂಡು ಜೀವನ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ಇತ್ತೀಚಿಗೆ ಐದು ಹಸುಗಳ ಪೈಕಿ ಎರಡು ಹಸುಗಳು ಸಾವನ್ನಪ್ಪಿದ್ದವು. ಜಮೀನನಲ್ಲಿ ಬೆಳೆದ ಬೆಳೆಯು ಕೈಗೆ ಸಿಗದೆ ನಷ್ಟ ಎದುರಾದ ಪರಿಣಾಮ ಇಂದು ಮಧ್ಯಾಹ್ನ ತನ್ನ ಮನೆಯಲ್ಲಿ ಕ್ರಿಮಿನಾಶಕ ಸೇವಿಸಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ವೃತ್ತ ನಿರೀಕ್ಷಕ ರಾಜಣ್ಣ ಭೇಟಿ ನೀಡಿದರು. ಶವ ಪರೀಕ್ಷೆ ನಡೆಸಿ ನಂತರ ಅವರ ವಾರಾಸುದಾರರಿಗೆ ಒಪ್ಪಿಸಲಾಯಿತು.