ರಫೇಲ್ ಡೀಲ್ ‘ಬೋಫೋರ್ಸ್ ಹಗರಣದ ತಂದೆ’: ಶಿವಸೇನೆ ಸಂಸದ ಸಂಜಯ್ ರಾವತ್
Update: 2018-10-01 10:42 GMT
ಹೊಸದಿಲ್ಲಿ, ಅ.1: ರಫೇಲ್ ಡೀಲ್ ಎನ್ನುವುದು ‘ಬೋಫೋರ್ಸ್ ಹಗರಣದ ತಂದೆ’ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ. ರಫೇಲ್ ವಿವಾದಕ್ಕೆ ಸಂಬಂಧಿಸಿ ಇತರ ರಾಜಕೀಯ ಪಕ್ಷಗಳು ಸುಮ್ಮನಿರುವಾಗ ಈ ಬಗ್ಗೆ ಮಾತನಾಡುತ್ತಿರುವುದರಿಂದ ರಾಹುಲ್ ಗಾಂಧಿಯವರ ಪ್ರಾಮುಖ್ಯತೆ ಹೆಚ್ಚಿದೆ ಎಂದವರು ಇದೇ ಸಂದರ್ಭ ಹೇಳಿದರು.
“65 ಕೋಟಿ ರೂ.ಗಳ ಲಾಭವನ್ನು ಸೋನಿಯಾ ಗಾಂಧಿಯವರ ಕುಟುಂಬ ಪಡೆದಿದೆ ಎಂದು ಆರೋಪಿಸುತ್ತಿದ್ದವರು ಇಂದು ಅಧಿಕಾರದಲ್ಲಿದ್ದಾರೆ. ಇದೀಗ ರಫೇಲ್ ಜೆಟ್ ಡೀಲ್ ನಲ್ಲಿ 700 ಕೋಟಿ ರೂ. ಜೇಬಿಗಿಳಿಸಿದ್ದಾರೆ ಎನ್ನುವ ಆರೋಪ ಇದೀಗ ಅವರ ಮೇಲಿದೆ” ಎಂದು ರಾವತ್ ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಬರೆದಿದ್ದಾರೆ.
ರಫೇಲ್ ಡೀಲ್ ಗೆ ಸಂಬಂಧಿಸಿ ಹೇಳಿಕೆ ನೀಡಿದ ಫ್ರಾನ್ಸ್ ನ ಮಾಜಿ ಅಧ್ಯಕ್ಷ ಒಲಾಂಡೆಯವರನ್ನು ರಾಹುಲ್ ಗಾಂಧಿಯವರ ಬೆಂಬಲಿಗ ಅಥವಾ ದೇಶದ್ರೋಹಿ ಎಂದು ಕರೆಯಬೇಕೆ ಎಂದು ರಾವತ್ ಹೇಳಿದ್ದಾರೆ.