ಒಳ್ಳೆಯ ಮುಹೂರ್ತ ನೋಡಿ ಕಾಂಗ್ರೆಸ್ ಸೇರುತ್ತೇನೆ: ಅರಣ್ಯ ಸಚಿವ ಆರ್.ಶಂಕರ್

Update: 2018-10-05 11:44 GMT
ಸಚಿವ ಆರ್.ಶಂಕರ್

ಮೈಸೂರು,ಅ.5: ಒಳ್ಳೆಯ ಮುಹೂರ್ತ ನೋಡಿ ನಾನು ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗುತ್ತೇನೆ ಎಂದು ಅರಣ್ಯ ಸಚಿವ ಆರ್.ಶಂಕರ್ ಹೇಳಿದರು.

ವನ್ಯಜೀವಿ ಸಪ್ತಾಹದ ಅಂಗವಾಗಿ ಅರಮನೆ ಆವರಣದಲ್ಲಿ ಶುಕ್ರವಾರ ದಸರಾ ಗಜಪಡೆಗೆ ಪೂಜೆ ಸಲ್ಲಿಸಿ ಮಾವುತರು, ಕಾವಾಡಿಗಳಿಗೆ ದಿನ ನಿತ್ಯ ಬಳಕೆಯಾಗುವ ಕೊಡೆ, ಜರ್ಕಿನ್, ಖಾಕಿ ಸಮವಸ್ತ್ರ, ಟೀ ಶರ್ಟ್, ನೀರಿನ ಬಾಟಲ್, ಟೋಪಿ ಇತ್ಯಾದಿಗಳನ್ನು ವಿತರಿಸಿ ನಂತರ ಮಾಧ್ಯಮದವರೊಂದಿಗೆ ಮಾನಾಡಿದರು. 

ಅಧಿಕೃತವಾಗಿ, ಒಳ್ಳೆಯ ಮುಹೂರ್ತ ನೋಡಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದೇನೆ. ನಾನು ಸಚಿವ ಸಂಪುಟದಲ್ಲೇ ಇರುತ್ತೇನೆ. ಸಂಪುಟ ವಿಸ್ತರಣೆ ಹಾಗೂ ಖಾತೆ ಬದಲಾವಣೆ ವಿಚಾರ ಗಮನಕ್ಕೆ ಬಂದಿಲ್ಲ. ಆ ಬಗ್ಗೆ ವರಿಷ್ಠರು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದರು. ಸಚಿವ ಆರ್.ಶಂಕರ್ ಬಿಜೆಪಿ ಸೇರುತ್ತಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೆಲವು ಗೊಂದಲಗಳು ಮಾಧ್ಯಮಗಳಲ್ಲಷ್ಟೇ ಸೃಷ್ಟಿಯಾಗಿದೆ. ಆ ರೀತಿ ಗೊಂದಲವಾಗಬಾರದೆಂದೇ ನಾನು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ ಎಂದರು.

ಬಿಬಿಎಂಪಿ ಉಪಮೇಯರ್ ರಮಿಳಾ ಉಮಾಶಂಕರ್ ಹಠಾತ್ ನಿಧನಕ್ಕೆ ಸಚಿವ ಆರ್.ಶಂಕರ್ ಸಂತಾಪ ವ್ಯಕ್ತಪಡಿಸಿದರು. 'ಕೇವಲ ಒಂದು ವಾರದ ಹಿಂದೆಯಷ್ಟೇ ಅವರು ಅಧಿಕಾರ ಸ್ವೀಕರಿಸಿದ್ದರು. ಆದರೆ ಈ ರೀತಿ ಹಠಾತ್ ಮರಣ ಹೊಂದಿದ್ದು ನಮಗೆಲ್ಲ ಅಚ್ಚರಿ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News