ಶಿವಮೊಗ್ಗ: ನೇಣು ಬಿಗಿದು ಸರ್ಕಾರಿ ಪಾಲಿಟೆಕ್ನಿಕ್ ನೌಕರ ಆತ್ಮಹತ್ಯೆ
Update: 2018-10-05 11:59 GMT
ಶಿವಮೊಗ್ಗ, ಅ. 5: ಸರ್ಕಾರಿ ಪಾಲಿಟೆಕ್ನಿಕ್ ನೌಕರನೋರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಸೊರಬ ಪಟ್ಟಣ ಸಮೀಪದ ಉದ್ರಿ ರಸ್ತೆಯ ಜಮೀನೊಂದರಲ್ಲಿ ನಡೆದಿದೆ.
ಮೂಲತಃ ಬೆಳಗಾವಿ ಮೂಲದ ನಾಗೇಂದ್ರ (35) ಆತ್ಮಹತ್ಯೆಗೆ ಶರಣಾದ ನೌಕರ ಎಂದು ಗುರುತಿಸಲಾಗಿದೆ. ಇವರು ಡಿ ಗ್ರೂಪ್ ನೌಕರರಾಗಿದ್ದರು. ಕಳೆದ ಒಂದು ತಿಂಗಳ ಹಿಂದಷ್ಟೆ ಗುತ್ತಿಗೆ ಆಧಾರದ ಮೇಲೆ ಕರ್ತವ್ಯಕ್ಕೆ ಸೇರ್ಪಡೆಯಾಗಿದ್ದರು. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.