ಕೆ.ಆರ್.ಪೇಟೆ: ಕಾಲುಜಾರಿ ನಾಲೆಗೆ ಬಿದ್ದು ರೈತ ಸಾವು

Update: 2018-10-09 18:18 GMT

ಕೆ.ಆರ್.ಪೇಟೆ, ಅ.9: ದನಗಳ ಮೈ ತೊಳೆಯಲು ತೆರಳಿದ್ದ ರೈತರೊಬ್ಬರು ಕಾಲುಜಾರಿ ನಾಲೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಅಂಚನಹಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

ಗ್ರಾಮದ ಪ್ರಗತಿಪರ ರೈತ ನಂಜಶೆಟ್ಟರ ಪುತ್ರ ರಮೇಶ್(45) ಸಾವನ್ನಪ್ಪಿದವರಾಗಿದ್ದು, ಇವರು ನಾಲೆಯಲ್ಲಿ ದನಗಳಿಗೆ ನೀರು ಕುಡಿಸಿ ಮೈ ತೊಳೆಯಲು ಇಳಿದಾಗ ಈ ದುರ್ಘಟನೆ ಸಂಭವಿಸಿದೆ.

ಮೃತ ರಮೇಶ್ ಅವರಿಗೆ ಪತ್ನಿ ಅಂಬಿಕ, ಪುತ್ರ, ಪುತ್ರಿ ಇದ್ದಾರೆ. ಸಬ್‍ಇನ್ಸ್ ಪೆಕ್ಟರ್ ಆನಂದಗೌಡ ಸ್ಥಳಕ್ಕೆ ಭೇಟಿ ಪರಿಶೀಲಸಿದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News