ಉಗ್ರರೊಂದಿಗೆ ಸಂಪರ್ಕ ಆರೋಪ: ಪಂಜಾಬ್‌ನಲ್ಲಿ ಮೂವರು ಕಾಶ್ಮೀರಿ ವಿದ್ಯಾರ್ಥಿಗಳ ಸೆರೆ

Update: 2018-10-10 15:25 GMT

ಚಂಡಿಗಡ,ಅ.10: ಪಂಜಾಬ್ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಬುಧವಾರ ಬೆಳಗಿನ ಜಾವ ಜಲಂಧರ್‌ನಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ವಿದ್ಯಾರ್ಥಿಗಳನ್ನು ಬಂಧಿಸುವ ಮೂಲಕ ಕಾಶ್ಮೀರಿ ಭಯೋತ್ಪಾದಕ ಸಂಘಟನೆ ಅನ್ಸಾರ್ ಘಜಾವತ್-ಉಲ್-ಹಿಂದ್ (ಎಜಿಎಚ್)ನ ಸುಪ್ತ ಘಟಕವೊಂದನ್ನು ಭೇದಿಸಿದ್ದಾರೆ.

ಜಲಂಧರ್‌ನ ಹೊರವಲಯದ ಶಾಹಪುರದ ಸಿ.ಟಿ.ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮ್ಯಾನೇಜ್‌ಮೆಂಟ್ ಆ್ಯಂಡ್ ಟೆಕ್ನಾಲಜಿಯ ಹಾಸ್ಟೆಲ್‌ನಿಂದ ಝಾಹಿದ್ ಗುಲ್ಝಾರ್,ಮುಹಮ್ಮದ್ ಇದ್ರಿಸ್ ಅಲಿಯಾಸ್ ನದೀಂ ಮತ್ತು ಯೂಸುಫ್ ರಫೀಕ್ ಭಟ್ ನನ್ನು ಬಂಧಿಸಲಾಗಿದ್ದು,ಮೂವರೂ ಕಾಶ್ಮೀರದ ನಿವಾಸಿಗಳಾಗಿದ್ದಾರೆ. ಅವರಿಂದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಜಿಪಿ ಸುರೇಶ ಅರೋರಾ ಅವರು ಇಲ್ಲಿ ಹೇಳಿಕೆಯಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News