ಶಬರಿಮಲೆಗೆ ತೆರಳುತ್ತಿದ್ದ ಇಬ್ಬರು ಮಹಿಳೆಯರನ್ನು ತಡೆದು ವಾಪಸ್ ಕಳುಹಿಸಿದ ಪ್ರತಿಭಟನಕಾರರು

Update: 2018-10-17 08:10 GMT

ತಿರುವನಂತಪುರಂ, ಅ.17: ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಬಂದಿದ್ದ ಇಬ್ಬರು ಮಹಿಳೆಯರನ್ನು  ಪ್ರತಿಭಟನಕಾರರು ವಾಪಸ್ ಕಳುಹಿಸಿರುವ ಘಟನೆ ನಡೆದಿದೆ.

ಆಂಧ್ರಪ್ರದೇಶದಿಂದ ಇಬ್ಬರು ಮಕ್ಕಳು ಮತ್ತು ಕುಟುಂಬದೊಂದಿಗೆ ಆಗಮಿಸಿದ್ದ 45 ವರ್ಷದ ಮಾಧವಿ ಶಬರಿಮಲೆ ದೇವಸ್ಥಾನದೆಡೆಗೆ ಸಾಗುತ್ತಿದ್ದಂತೆ ಅವರನ್ನು ಪ್ರತಿಭಟನಕಾರರು ತಡೆದರು. ನಂತರ ಅವರನ್ನು ಸುತ್ತುವರಿದ ಪ್ರತಿಭಟನಕಾರರು ಬಲವಂತವಾಗಿ ಹಿಂದಕ್ಕೆ ಕಳುಹಿಸಿದರು ಎಂದು ಆರೋಪಿಸಲಾಗಿದೆ.

ಕೆಲವು ಮೀಟರ್ ಗಳವರೆಗೆ ಪೊಲೀಸರು ರಕ್ಷಣೆ ನೀಡಿದ್ದರು. ಆದರೆ ದೇವಸ್ಥಾನ ಸಮೀಪಿಸುತ್ತಿದ್ದಂತೆ ತಮ್ಮನ್ನು ಬಿಟ್ಟು ತೆರಳಿದರು. ಬೇರೆ ಯಾವುದೇ ಆಯ್ಕೆಯಿಲ್ಲದೆ ಹಿಂದಿರುಗಿದೆವು ಎಂದು ಮಾಧವಿ ಮಾಧ್ಯಮಗಳೊಂದಿಗೆ ಹೇಳಿದ್ದಾರೆ.

ಕೇರಳದ ಪತ್ರಕರ್ತೆ ಲಿಬಿ ಸಿ.ಎಸ್. ಎಂಬವರನ್ನೂ ಪ್ರತಿಭಟನಕಾರರು ಬಸ್ ನಿಲ್ದಾಣದಲ್ಲಿ ತಡೆದಿದ್ದಾರೆ ಎನ್ನಲಾಗಿದೆ. ತಾನು ಶಬರಿಮಲೆಗೆ ತೆರಳುವುದಾಗಿ ಅವರು ಫೇಸ್ಬುಕ್ ಪೋಸ್ಟ್ ಹಾಕಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News