ಮೈಸೂರು: ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ 9ನೇ ಘಟಿಕೋತ್ಸವ

Update: 2018-10-17 17:20 GMT

ಮೈಸೂರು,ಅ.17: ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಒಂಭತ್ತನೇ ಘಟಿಕೋತ್ಸವ ಇಂದು ನಡೆಯಿತು.

ಮೈಸೂರಿನ ಜೆಎಸ್‍ಎಸ್ ಡೆಂಟಲ್ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಸ್ವಾಗತ ಭಾಷಣ ಮಾಡಿದ ಜೆಎಸ್ಎಸ್ ವಿವಿ ಕುಲಪತಿ ಸುರೇಶ್, ಜೆಎಸ್ಎಸ್ ವಿವಿಯ ಸಾಧನೆಗಳ ಬಗ್ಗೆ ವಿವರಣೆ ನೀಡಿದರು.

ಬಳಿಕ  ಶಿವರಾತ್ರಿ ದೇಶಿಕೆಂದ್ರ ಮಹಾ ಸ್ವಾಮೀಜಿ ಮತ್ತು ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿಯವರು ಮಾಸ್ಟರ್ ಆಫ್ ಫಿಲಾಸಫಿ, ಡಾಕ್ಟರ್ ಆಫ್ ಫಿಲಾಸಫಿ ಪದವೀಧರರಿಗೆ ಮತ್ತು ಇತರೆ ವಿಭಾಗದ ಪದವೀಧರರಿಗೆ ಪ್ರಮಾಣ ಪತ್ರಗಳು, ಪದಕಗಳನ್ನು ವಿತರಿಸಿ ಗೌರವಿಸಿದರು. ನಂತರ ಸುಧಾಮೂರ್ತಿ ಯವರು ಘಟಿಕೋತ್ಸವ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿಗಳಾದ ಸಿಜಿ ಬೆಟಸೂರ್ ಮಠ್, ಸುರೇಂದ್ರ ಭಟ್, ಶಿವರಾಜ್ ಪಟೇಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News