ರಾವಣ ದಹನ ವೀಕ್ಷಿಸುತ್ತಿದ್ದ ವೇಳೆ ರೈಲು ಹರಿದು 15 ಮಂದಿ ಮೃತ್ಯು
Update: 2018-10-19 15:02 GMT
ಹೊಸದಿಲ್ಲಿ, ಅ.19: ರೈಲು ಹಳಿಯಲ್ಲಿ ನಿಂತು ರಾವಣ ದಹನ ವೀಕ್ಷಿಸುತ್ತಿದ್ದ ಸಂದರ್ಭ ರೈಲು ಹರಿದು 15 ಮಂದಿ ಮೃತಪಟ್ಟ ಘಟನೆ ಅಮೃತಸರದಲ್ಲಿ ನಡೆದಿದೆ. ಪಟಾಕಿಗಳ ಸದ್ದಿನಿಂದ ರೈಲಿನ ಶಬ್ಧ ಕೇಳಿಸಿರಲಿಲ್ಲ ಎನ್ನಲಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಯಿದೆ.
ಘಟನಾ ಸ್ಥಳದಲ್ಲಿ ಸುಮಾರು 700 ಮಂದಿಯಿದ್ದರು. ಮೃತಪಟ್ಟವರಲ್ಲಿ ಮಕ್ಕಳು, ಮಹಿಳೆಯರು ಸೇರಿದ್ದಾರೆ ಎಂದು ತಿಳಿದುಬಂದಿದೆ.