ಮಣಿಪುರ ಸಿಎಂ ಭೇಟಿ ನೀಡಲಿದ್ದ ಸ್ಥಳದಲ್ಲಿ ಬಾಂಬ್ ಸ್ಫೋಟ

Update: 2018-10-19 16:49 GMT

ಇಂಫಾಲ, ಅ. 19: ಮಣಿಪುರದ ಕಂಗ್‌ಪೊಕ್ಪಿ ಜಿಲ್ಲೆಯ ಮಾರುಕಟ್ಟೆ ಪ್ರದೇಶದಲ್ಲಿ ಅಪರಿಚಿತ ದುಷ್ಕರ್ಮಿಗಳು ಪ್ರಭಾವಶಾಲಿ ಸ್ಫೋಟ ನಡೆಸಿದ್ದಾರೆ.

ಮಣಿಪುರ ಮುಖ್ಯಮಂತ್ರಿ ಎನ್. ಬೈರೇನ್ ಸಿಂಗ್ ಶೇಖಾವತ್ ಇಲ್ಲಿಗೆ ಭೇಟಿ ನೀಡಲಿದ್ದ ಕೆಲವು ಗಂಟೆಗಳಿಗಿಂತ ಮುನ್ನ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಂಗ್‌ಪೊಕ್ಪಿ ಪೊಲೀಸ್ ಠಾಣಾ ವ್ಯಾಪ್ತಿಯ ಕಂಗ್‌ಪೊಕ್ಪಿ ಬಝಾರ್‌ನ ಅಂಚೆ ಕಚೇರಿ ಸಮೀಪ ಗುರುವಾರ ತಡ ರಾತ್ರಿ ಈ ಸ್ಫೋಟ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ. ಮಹಿಳಾ ಮಾರುಕಟ್ಟೆ ಹಾಗೂ ವೈದ್ಯರು, ಅಧ್ಯಾಪಕರಿಗೆ ಸಾರಿಗೆ ಸೌಕರ್ಯಕ್ಕಾಗಿ ಕಟ್ಟಡ ನಿರ್ಮಿಸಲು ಶಂಕು ಸ್ಥಾಪನೆಗೆ ಕಂಗ್‌ಪೊಕ್ಪಿ ಬಝಾರ್‌ನ ಸಮೀಪದ ಪ್ರದೇಶಕ್ಕೆ ಶುಕ್ರವಾರ ಎನ್. ಬೈರನ್ ಸಿಂಗ್ ಭೇಟಿ ನೀಡಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯಮಂತ್ರಿ ಅವರ ಕಾರ್ಯಕ್ರಮ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿತ್ತು. ಆದರೆ, ಸ್ಫೋಟದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಇಂತಹ ವಿಧ್ವಂಸಕ ಚಟುವಟಿಕೆ ಸಂಭವಿಸದಂತೆ ಪೊಲೀಸರು ಭದ್ರತಾ ಕ್ರಮ ಕೈಗೊಂಡಿದ್ದಾರೆ. ಸ್ಫೋಟ ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News