ಮಂಡ್ಯ: ಶಿಂಷಾ ನದಿಯಲ್ಲಿ ಮುಳುಗಿ ಯುವಕ ಸಾವು

Update: 2018-10-21 18:20 GMT

ಮಂಡ್ಯ, ಅ.21: ಸ್ನೇಹಿತರ ಜೊತೆ ಈಜಲು ತೆರಳಿದ್ದ ಯುವಕನೋರ್ವ ಮದ್ದೂರು ತಾಲೂಕಿನ ಅಣೆದೊಡ್ಡಿ ಬಳಿ ಶಿಂಷಾನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.

ನಾಗಮಂಗಲ ತಾಲೂಕಿನ ದೇವಲಾಪುರ ಹೋಬಳಿಯ ತೊರೆಮಲ್ಲನಾಯಕನಹಳ್ಳಿ ಗ್ರಾಮದ ನಾಗಲಿಂಗಚಾರ್ ಎಂಬವರ ಪುತ್ರ ಎನ್.ಲೋಕೇಶ್(25) ಮೃತಪಟ್ಟ ಯುವಕ.

ಆಯುಧಪೂಜೆ ಹಬ್ಬಕ್ಕೆ ಮರಳಿಗ ಗ್ರಾಮದ ತನ್ನ ಸಂಬಂಧಿಕರ  ಮನೆಗೆ ಬಂದಿದ್ದ ಲೋಕೇಶ್, ಗೆಳೆಯರ ಜತೆ ಶನಿವಾರ ಶಿಂಷಾನದಿಯಲ್ಲಿ ಈಜಲು ತೆರಳಿದ್ದ ಎನ್ನಲಾಗಿದೆ.

ಗ್ರಾಮಸ್ಥರ ಸಹಕಾರದಿಂದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ರವಿವಾರ ಬೆಳಗ್ಗೆ ನೀರಿನಿಂದ  ಯುವಕನ ಮೃತ ದೇಹವನ್ನು ಹೊರತೆಗೆದರು.
ಸಿಪಿಐ ಮಹೇಶ್, ಕೊಪ್ಪ ಪ್ರಭಾರ ಎಸ್‍ಐ ಸಂತೋಷ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News