ದಾವಣಗೆರೆ: ಯುವಕನ ಬರ್ಬರ ಹತ್ಯೆ

Update: 2018-10-27 13:43 GMT

ಹರಿಹರ,ಅ.27: ಗಾರೆ ಕೆಲಸ ಮಾಡುತ್ತಿದ್ದ ಯುವಕನನ್ನು ಗಾಜಿನಿಂದ ಇರಿದು ಕೊಲೆಗೈದಿರುವ ಘಟನೆ ಇಲ್ಲಿನ ವಿದ್ಯಾನಗರ ಸಿ ಬ್ಲಾಕ್‍ನ ಟೀಚರ್ಸ್ ಕಾಲೋನಿಯ ಧನಲಕ್ಷ್ಮೀ ಲೇಔಟ್‍ನಲ್ಲಿ ನಡೆದಿದೆ.

ಕಾಂತರಾಜ್ (19) ಕೊಲೆಯಾದ ಯುವಕ. ನಗರದ ಹೈಸ್ಕೂಲ್ ಬಡಾವಣೆಯ ಮಹಾತ್ಮಗಾಂಧಿ ಕೊಳಚೆ ಪ್ರದೇಶ 5ನೇ ಮೇನ್ 16ನೇ ಕ್ರಾಸ್ ನಿವಾಸಿಯಾದ ಕಾಂತರಾಜ್ ಗಾರೆ ಕೆಲಸ ಮಾಡುತ್ತಿದ್ದ. ಯಾವುದೋ ಕಾರಣಕ್ಕಾಗಿ ಕಾಂತರಾಜ್‍ನನ್ನು ಹೊಡೆದು ಕುತ್ತಿಗೆ ಮತ್ತು ಹೊಟ್ಟೆಗೆ ಭೀಕರವಾಗಿ ಗಾಜಿನಿಂದ ಇರಿದು ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಈ ಬಗ್ಗೆ ತನಿಖೆ ಮುಂದುವರೆದಿದ್ದು, ಪ್ರಕರಣ ನಗರಠಾಣೆಯಲ್ಲಿ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News