ಶಬರಿಮಲೆ ಪ್ರವೇಶ ಯತ್ನ ಕೈಬಿಡೆನು: ರೆಹಾನಾ ಫಾತಿಮಾ

Update: 2018-10-28 06:13 GMT

ಕೊಚ್ಚಿನ್, ಅ. 28: ಶಬರಿಮಲೆ ಶ್ರೀ ಧರ್ಮಶಾಸ್ತಾ ದೇವಾಲಯ ಪ್ರವೇಶಿಸಲು ರೆಹಾನಾ ಫಾತಿಮಾ (31) ಪ್ರಯತ್ನಿಸಿರುವ ಬಗ್ಗೆ ಎಲ್ಲೆಡೆಯಿಂದ ವ್ಯಾಪಕ ಟೀಕೆ ವ್ಯಕ್ತವಾಗಿದ್ದರೂ, ತಮ್ಮ ಪ್ರಯತ್ನ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಿಎಸ್ಸೆನ್ನೆಲ್ ಉದ್ಯೋಗಿಯಾಗಿರುವ ರೆಹಾನಾ ಫಾತಿಮಾರನ್ನು ಬುಧವಾರ ಪಲರಿವಟ್ಟಂ ದೂರವಾಣಿ ವಿನಿಮಯ ಕೇಂದ್ರಕ್ಕೆ ವರ್ಗಾಯಿಸಲಾಗಿತ್ತು. ಕಳೆದ ವಾರ ಪಣಂಪಿಲ್ಲಿ ನಗರದಲ್ಲಿರುವ ಆಕೆಯ ಕ್ವಾರ್ಟಸ್ ಮೇಲೆ ಕಿಡಿಗೇಡಿಗಳು ದಾಳಿ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ವರ್ಗಾಯಿಸಲಾಗಿತ್ತು. 80 ಮಂದಿ ಪೊಲೀಸರ ಬೆಂಗಾವಲಿನಲ್ಲಿ ಮಂದಿರದಿಂದ 500 ಮೀಟರ್ ದೂರದವರೆಗೂ ರೆಹಾನಾ ಫಾತಿಮಾ ಹೋಗಿದ್ದರು. ಹೈದರಾಬಾದ್‌ನ ಟಿವಿ ವರದಿಗಾರ್ತಿ ಕವಿತಾ ಜಕ್ಕಳ ಕೂಡಾ ಅವರ ಜತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News