ಕೊಳ್ಳೇಗಾಲ: ಬಿಸಿ ನೀರಿದ್ದ ಪಾತ್ರೆಗೆ ಬಿದ್ದಿದ್ದ ಮಗು ಮೃತ್ಯು

Update: 2018-10-28 15:11 GMT

ಕೊಳ್ಳೇಗಾಲ,ಅ.28: ಬಿಸಿನೀರಿದ್ದ ಪಾತ್ರೆಗೆ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.

ಪಟ್ಟಣದ ಆಶ್ರಯ ಬಡಾವಣೆಯ ಮಹದೇವಸ್ವಾಮಿರವರ ಮಗಳು ಒಂದು ವರ್ಷದ ಆದ್ಯ(1) ಮೃತ ಮಗು.

ಕಳೆದ ಅ.10 ರಂದು ಆದ್ಯಳಿಗೆ ಅವಳ ತಾಯಿ ಸ್ನಾನ ಮಾಡಿಸುವ ಸಲುವಾಗಿ ಒಂದು ಪಾತ್ರೆಗೆ ಬಿಸಿನೀರನ್ನು ಹಾಕಿ ತಣ್ಣೀರನ್ನು ತರಲು ಹೊರಗೆ ಹೋಗಿದ್ದಾಗ, ಮಗು ನೀರಿನ ಪಾತ್ರೆಗೆ ಬಿದ್ದು ಮೈಸುಟ್ಟು ಗಾಯಗೊಂಡಿತ್ತು. ತಕ್ಷಣ ಮಗುವನ್ನು ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಸೇರಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಇಂದು ಸಾವನ್ನಪ್ಪಿದೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News