ತುಮಕೂರು: ವ್ಯಕ್ತಿಯ ಕೊಲೆ ಪ್ರಕರಣ; ನಾಲ್ವರು ಆರೋಪಿಗಳ ಬಂಧನ

Update: 2018-11-07 18:55 GMT

ತುಮಕೂರು,ನ.07: ಅನೈತಿಕ ಸಂಬಂಧಕ್ಕೆ ಅಡ್ಡಿಯಾದನೆಂಬ ಕಾರಣಕ್ಕೆ ತನ್ನ ಗಂಡನನ್ನೇ, ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿ ರಾಷ್ಟ್ರೀಯ ಹೆದ್ದಾರಿ 48ರ ಕುಣಿಗಲ್ ತಾಲೂಕು ಬಿದನಗೆರೆ ಗ್ರಾಮದ ಬಳಿ ಬಿಸಾಕಿ ಹೋಗಿದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರು ಈ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ರಾಯಚೂರಿನ ಹೊಟೇಲ್ ನ್ಯಾಚುರಲ್ ಹೋಮ್ ಹೊಟೇಲ್‍ನ ಮಾಲಕ ಬಸವನಗೌಡ(37) ಬೆಂಗಳೂರಿನ ಕ್ರೈಂ ಪೊಕಸ್ ನ್ಯೂಸ್ ರಿಪೋರ್ಟರ್ ತೇಜೇಶ್ವರಿ(27) ವಿಡಿಯೋ ಗ್ರಾಫರ್ ಪ್ರಕಾಶ್ ಕುಮಾರ್(37) ಮತ್ತು ಕಾರು ಚಾಲಕ ಆಶೋಕ್ ಜೆ.(38) ಗುರುತಿಸಲಾಗಿದೆ. 

2018ರ ಅಕ್ಟೋಬರ್ 29 ರಂದು ರಾಷ್ಟ್ರೀಯ ಹೆದ್ದಾರಿ 48ರ ಕುಣಿಗಲ್ ತಾಲೂಕು ಬಿದನಗೆರೆ ಹತ್ತಿರ ಅಪರಿಚಿತ ಶವವೊಂದು ಪತ್ತೆಯಾಗಿದ್ದು, ಯಾರೋ ಕೊಲೆ ಮಾಡಿ ತಂದು ಬಿಸಾಕಿ ಹೋಗಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಸಿಪಿಐ ಅಶೋಕಕುಮಾರ್ ನೇತೃತ್ವದ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಬಂಧಿತರಿಂದ ಆರೋಪಿಗಳಿಂದ ಮೊಬೈಲ್, 800 ನಗದು, ಆಧಾರ್ ಕಾರ್ಡು, ಬಸ್ ಮತ್ತು ಟ್ರೈನ್ ಟಿಕೆಟ್‍ಗಳನ್ನು ವಶಪಡಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News