ಸೂಕ್ತವಲ್ಲದ ಆಹಾರಗಳ ಮೂಲಕ ಜಯಲಲಿತಾಗೆ ‘ಸ್ಲೋ ಪಾಯ್ಸನ್’ ನೀಡಿದ ಶಶಿಕಲಾ

Update: 2018-11-11 17:04 GMT

ಚೆನ್ನೈ, ನ.11: ತಮಿಳುನಾಡಿನ ಮಾಜಿ ಸಿಎಂ ಜೆ. ಜಯಲಲಿತಾರ ಸಾವಿಗೆ ಅವರ ಬಹುಕಾಲದ ಆಪ್ತೆ ವಿ.ಕೆ. ಶಶಿಕಲಾ ಕಾರಣ ಎಂದು ಎಐಎಡಿಎಂಕೆ ಪಕ್ಷದ ಹಿರಿಯ ನಾಯಕ ಹಾಗು ಸಚಿವ ದಿಂಡಿಗಲ್ ಸಿ. ಶ್ರೀನಿವಾಸನ್ ಆರೋಪಿಸಿದ್ದಾರೆ.

ಜಯಲಲಿತಾರ ಆರೋಗ್ಯಕ್ಕೆ ಸೂಕ್ತವಲ್ಲದ ಆಹಾರಗಳನ್ನು ನೀಡುತ್ತಾ ಶಶಿಕಲಾ ‘ಸ್ಲೋ ಪಾಯ್ಸನ್ ತಿನ್ನಿಸುವ’ ಮೂಲಕ ಕೊಂದಿದ್ದಾರೆ ಎಂದವರು ಆರೋಪಿಸಿದ್ದಾರೆ. ದಿಂಡಿಗಲ್ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಜಯಲಲಿತಾ ಹತ್ಯೆಯಲ್ಲಿ ಶಶಿಕಲಾ ಹಾಗು ಅವರ ಸಂಬಂಧಿ ಟಿಟಿವಿ ದಿನಕರನ್ ಕೈವಾಡವಿದೆ” ಎಂದವರು ಆರೋಪಿಸಿದರು.

“ಜಯಲಲಿತಾರಿಗೆ ಮಧುಮೇಹ ಸಮಸ್ಯೆಯಿತ್ತು. ಆದರೆ ಶಶಿಕಲಾ ಈ ಬಗ್ಗೆ ಗಮನ ನೀಡಲಿಲ್ಲ. ಜಯಲಲಿತಾರ ಆರೋಗ್ಯಕ್ಕೆ ಸೂಕ್ತವಲ್ಲದ ಆಹಾರಗಳನ್ನು ನೀಡಿ ‘ಸ್ಲೋ ಪಾಯ್ಸನ್’ ನೀಡಿದರು. ಇದುವೇ ನಮ್ಮ ನಾಯಕಿಯ ಸಾವಿಗೆ ಕಾರಣ” ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News