ಗಂಗಾಧರ್
Update: 2018-11-14 06:08 GMT
ಸುಂಟಿಕೊಪ್ಪ, ನ.14: ಮಾದಾಪುರ ರಸ್ತೆಯಲ್ಲಿರುವ ಸ್ವಾಮಿ ಇಂಜಿನಿಯರಿಂಗ್ ವರ್ಕ್ಸ್ ನ ಮಾಲಕ ಸುಂಟಿಕೊಪ್ಪವರ್ಕ್ಶಾಪ್ ಮಾಲಕರ ಸಂಘದ ಗೌರವಾಧ್ಯಕ್ಷ ಎಚ್. ಗಂಗಾಧರ್(71) ಅಲ್ಪ ಕಾಲದ ಅಸೌಖ್ಯದಿಂದ ಮಂಗಳವಾರ ಸಂಜೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಸುಂಟಿಕೊಪ್ಪದ ಸುತ್ತಮುತ್ತಲಿನ ಯುವಕರಿಗೆ ವಾಹನಗಳ ದುರಸ್ತಿ (ಮೆಕ್ಯಾನಿಕ್) ಹುದ್ದೆಯನ್ನು ಪರಿಚಯಿಸಿದ ಕೀರ್ತಿ ಹಾಗೂ ಶಬರಿಮಲೆ ಅಯ್ಯಪ್ಪ ಸ್ವಾಮಿ ಕ್ಷೇತ್ರಕ್ಕೆ ಹಲವು ಕ್ತಾಧಿಗಳನ್ನು ಮೊದಲ ಬಾರಿಗೆ ಕರೆದುಕೊಂಡು ಹೋಗಿರುವ ಹಿರಿಮೆ ಇವರದಾಗಿದೆ. ಸುಂಟಿಕೊಪ್ಪ ಸುತ್ತಮುತ್ತಲಿನ ಜನತೆಗೆ ‘ಸ್ವಾಮಿ ಗಂಗಾಧರ್’ ಎಂದೇ ಚಿರಪರಿಚಿತರಾಗಿದ್ದಾರೆ.