ಸಾಗರದಲ್ಲಿ ಎಸಿಬಿ ದಾಳಿ: ಕೆ.ಆರ್.ಐ.ಡಿ.ಎಲ್ ಇಂಜಿನಿಯರ್ ಬಲೆಗೆ

Update: 2018-11-17 13:49 GMT

ಸಾಗರ,ನ.17: ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಗುತ್ತಿಗೆದಾರರಿಂದ ಲಂಚ ಸ್ವೀಕರಿಸುತ್ತಿದ್ದಾಗ ಶಿಕಾರಿಪುರದ ಕೆ.ಆರ್.ಐ.ಡಿ.ಎಲ್ ಇಂಜಿನಿಯರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಇಂಜಿನಿಯರ್ ಸತ್ಯನಾರಾಯಣ್ ಗುತ್ತಿಗೆದಾರ ಸುಶಾಂತ್ ಅವರಿಂದ ಬಿಲ್ ಪಾಸ್ ಮಾಡಿಕೊಡಲು 24 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇಂದು ಖಾಸಗಿ ಬಸ್ ನಿಲ್ದಾಣದಲ್ಲಿ ಗುತ್ತಿಗೆದಾರರಿಂದ ಹಣ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

ದಾಳಿಯಲ್ಲಿ ಎಸಿಬಿ ಡಿವೈಎಸ್ಪಿ ಚಂದ್ರಪ್ಪ, ಇನ್ಸ್ ಪೆಕ್ಟರ್ ತಿಪ್ಪೆಸ್ವಾಮಿ, ಸಿಬ್ಬಂದಿಗಳಾದ ವಸಂತ್, ನಾಗರಾಜ್, ಲಚ್ಚಾನಾಯ್ಕ್, ಹರೀಶ್, ಶ್ರೀನಿವಾಸ್, ರಘುನಾಯ್ಕ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News