ಮುಝಪ್ಫರ್ನಗರ್: ದಲಿತ ವ್ಯಕ್ತಿಯ ಹತ್ಯೆ
Update: 2018-11-17 16:24 GMT
ಮಝಫರ್ನಗರ್, ನ. 17: ಇಲ್ಲಿನ 38 ವರ್ಷದ ದಲಿತ ವ್ಯಕ್ತಿಯೋರ್ವನನ್ನು ಹತ್ಯೆಗೈಯಲಾಗಿದೆ ಹಾಗೂ ಮೃತದೇಹವನ್ನು ಅವರ ನಿವಾಸದ ಹೊರಗೆ ಎಸೆಯಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಹತ್ಯೆಯಾದ ವ್ಯಕ್ತಿಯನ್ನು ಮನೋಜ್ ಕುಮಾರ್ ಎಂದು ಗುರುತಿಸಲಾಗಿದೆ. ಕೆಲಸಕ್ಕೆಂದು ಹೋದ ಮನೋಜ್ ಮನೆಗೆ ಹಿಂದಿರುಗಿರಲಿಲ್ಲ. ಅನಂತರ ಹುಡುಕಾಡಿದಾಗ ಅವರ ಮೃತದೇಹ ಮುಝಪ್ಫರ್ನಗರ್ ಜಿಲ್ಲೆಯ ಪುರ್ಝಾಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹರೇಟಿ ಗ್ರಾಮದಲ್ಲಿರುವ ಅವರ ಮನೆಯ ಹೊರಗಡೆ ಪತ್ತೆಯಾಯಿತು. ಮನೋಜ್ ಸಹೋದರ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸುರೇಂದರ್, ಯಶ್ಪಾಲ್ ಹಾಗೂ ಸುಖ್ಬೀರ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಹತ್ಯೆ ಖಂಡಿಸಿ ಮನೋಜ್ ಕುಟುಂಬಿಕರು ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.