ನ.20ಕ್ಕೆ ಮರಿದೇವರು ದತ್ತಿ ಪ್ರಶಸ್ತಿ ಪ್ರದಾನ

Update: 2018-11-17 16:51 GMT

ಬೆಂಗಳೂರು, ನ. 17: ಪ್ರೊ.ಸಿ.ಎಚ್.ಮರಿದೇವರು ಪ್ರತಿಷ್ಠಾನ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನ.20ರ ಸಂಜೆ 5.30ಕ್ಕೆ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಳ್ಳಲಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಹೈಕೋರ್ಟ್‌ನ ನಿವೃತ್ತ ನ್ಯಾ.ಎಚ್.ಎನ್ ನಾಗಮೋಹನದಾಸ್, ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್ ಪ್ರತಿಷ್ಠಾನದ ಅಧ್ಯಕ್ಷ ಎಸ್.ರಾಜಶೇಖರ್ ಪಾಲ್ಗೊಳ್ಳಲಿದ್ದು, ಡಾ.ಗುರುರಾಜ ಕರಜಗಿ, ಡಾ.ಚಂದ್ರಶೇಖರ್ ತಾಳ್ಯ, ಗಂಗಮ್ಮ ಕೊಪ್ಪಳ, ಡಾ.ಸೋ.ಮು. ಭಾಸ್ಕರಾಚಾರ್, ರಾಜಶೇಖರ ರೇವಣ್ಣ ಸಿದ್ದಪ್ಪ ನಿಂಬರ್ಗಿ ಹಾಗೂ ಬಿ.ಸಿ.ರಮೇಶ್‌ರವರಿಗೆ ದತ್ತಿ ಪ್ರಶಸ್ತಿ ನೀಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News