ಮೈಸೂರು: ಹೆಂಡತಿಯ ನಿಂದನೆಯಿಂದ ಮನನೊಂದ ಪತಿ ಆತ್ಮಹತ್ಯೆ

Update: 2018-11-17 17:17 GMT

ಮೈಸೂರು,ನ.17: ಹೆಂಡತಿಯ ನಿಂದನೆಯಿಂದ ಮನನೊಂದ ಪತಿ ನೇಣಿಗೆ ಶರಣಾಗಿರುವ ಘಟನೆ ನಗರದ ಕೆಸರೆಯಲ್ಲಿ ನಡೆದಿದೆ.

ಮೃತನನ್ನು ಪ್ರಶಾಂತ್ (32) ಎಂದು ಗುರುತಿಸಲಾಗಿದ್ದು, ಈತ ವೃತ್ತಿಯಲ್ಲಿ ಕ್ಯಾಬ್ ಚಾಲಕನಾಗಿದ್ದ. ಕಳೆದ 5 ವರ್ಷಗಳ ಹಿಂದೆ ನಗರದ ತೇಜಸ್ವಿನಿ ಎಂಬ ಯುವತಿಯನ್ನು  ಮದುವೆಯಾಗಿದ್ದ. ಇವರಿಗೆ 4 ವರ್ಷದ ಹೆಣ್ಣು ಮಗು ಕೂಡ ಇದೆ. ಆದರೆ ಕಳೆದ ಕೆಲವು ದಿನಗಳಿಂದ ಸಂಸಾರದಲ್ಲಿ ಮನಸ್ತಾಪ ಉಂಟಾಗಿ ಈ ಕಲಹ ಪೊಲಿಸ್ ಠಾಣೆಯ ಮೆಟ್ಟಿಲೇರಿತ್ತು. ಇದರಿಂದ ಬೇಸರಗೊಂಡಿದ್ದ ಪ್ರಶಾಂತ್ ಬೇರೆ ವಾಸವಾಗಿದ್ದ. ನಿನ್ನೆ ಮಗುವನ್ನು ನೋಡಲು ಹೆಂಡತಿ ಮನೆಗೆ ಬಂದಿದ್ದ. ಈ ಸಂದರ್ಭದಲ್ಲಿ ಹೆಂಡತಿ ನಿಂದಿಸಿದಳು ಎನ್ನಲಾಗಿದ್ದು, ಇದರಿಂದ ಮನನೊಂದ ಈತ ಮನೆಗೆ ಹೋಗಿ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ಕುಟುಂಬಸ್ಥರು ಎನ್ ಆರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News