ಮೈಸೂರು: ಎರಡು ಲಕ್ಷ ರೂ. ನಗದು ದೋಚಿದ ಖದೀಮರು

Update: 2018-11-17 17:26 GMT

ಮೈಸೂರು,ನ.17: ವ್ಯಕ್ತಿಯೋರ್ವರು ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಬರುತ್ತಿದ್ದಾಗ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ವ್ಯಕ್ತಿಯ ಬಳಿಯಿದ್ದ ಹಣದ ಬ್ಯಾಗ್ ನ್ನು ಅಪಹರಿಸಿದ ಘಟನೆ ಶಿವರಾಂಪೇಟೆಯ ವಿನೋಬಾ ರಸ್ತೆಯಲ್ಲಿ ನಡೆದಿದೆ.

ವಿಜಯನಗರ ನಿವಾಸಿ, ಗುತ್ತಿಗೆದಾರ ರಾಜು ಎಂಬವರು ಕರೂರು ವೈಶ್ಯ ಬ್ಯಾಂಕಿನಿಂದ ಎರಡು ಲಕ್ಷ ರೂ. ಡ್ರಾ ಮಾಡಿಕೊಂಡು ಹೊರ ಬಂದಿದ್ದರು. ಬಳಿಕ ತಾವು ಕಾರಿ ನಿಲ್ಲಿಸಿದ ಕಡೆ ತೆರಳುತ್ತಿದ್ದರು. ಇದೇ ವೇಳೆ ಮೆಟ್ರೋಪೋಲ್ ವೃತ್ತದ ಕಡೆಯಿಂದ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಶಿವರಾಂಪೇಟೆಯ ವಿನೋಬಾ ರಸ್ತೆಯಲ್ಲಿ ಹಣದ ಬ್ಯಾಗ್ ಕಸಿದು ಪರಾರಿಯಾಗಿದ್ದಾರೆ.

ಈ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News