ಮಡಿಕೇರಿ: ಕಾರು ಮಗುಚಿ ಹರ್ಯಾಣ ಮೂಲದ ಮಹಿಳೆ ಸಾವು
Update: 2018-11-19 11:38 GMT
ಮಡಿಕೇರಿ, ನ.19: ಚಾಲಕನ ನಿಯಂತ್ರಣ ತಪ್ಪಿ ಕಾರು ಮಗುಚಿ ಬಿದ್ದ ಪರಿಣಾಮ ಹರ್ಯಾಣ ಮೂಲದ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ನಡೆದಿದೆ.
ಹರ್ಯಾಣ ಮೂಲಕ ವೈಶಾಲಿ(28) ಮೃತತಪಟ್ಟ ಮಹಿಳೆ.ರವಿವಾರ ಪೊನ್ನಂಪೇಟೆಯಲ್ಲಿ ಗೆಳೆಯನ ಮದುವೆಯಲ್ಲಿ ಭಾಗವಹಿಸಿ ರಾತ್ರಿ 11:30 ರ ಸುಮಾರಿಗೆ ಬೆಂಗಳೂರಿಗೆ ಹಿಂತಿರುಗಲು ಸ್ನೇಹಿತನ ಕಾರಿನಲ್ಲಿ ಬರುತ್ತಿದ್ದ ಸಂದರ್ಭ ಅರುವತ್ತೊಕ್ಲು ಪಂಚಾಯತ್ ಸಮೀಪ ಚಾಲಕನ ನಿಯಂತ್ರಣ ತಪ್ಪಿದೆ. ಮೊದಲು ವಿದ್ಯುತ್ ಕಂಬಕ್ಕೆ ಢಿಕ್ಕಿಯಾದ ಕಾರು ನಂತರ ಪಲ್ಟಿ ಹೊಡೆದು ಹಿಂದಿನ ಸೀಟಿನಲ್ಲಿ ಕುಳಿತಿದ್ದ ವೈಶಾಲಿ ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶ್ವೇತಾ, ಜೈಸನ್, ಥೋಮಸ್ ಹಾಗೂ ಸುನಿಲ್ ತಮ್ಮಯ್ಯ ಗಾಯಗೊಂಡಿದ್ದು, ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಗೋಣಿಕೊಪ್ಪ ಪೊಲೀಸರು ಮುಂದಿನ ತನಿಖೆ ಕೈಗೆತ್ತಿಕೊಂಡಿದ್ದಾರೆ.